ಸಿಂಗಾಪುರ: ಗಾಂಧಿ ಸ್ಮರಣ ಫಲಕ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಮಾಜಿ ಪ್ರಧಾನಿ ಗೋ ಚೋಕ್ ಟಾಂಗ್ ಅವರು ಇಂದು ರಾಜಧಾನಿ ಕ್ಲಿಫರ್ಡ್ ಪೈಯರ್ ನಲ್ಲಿ ಮಹಾತ್ಮಾ ಗಾಂಧಿಯವರ ಚಿತಾಭಸ್ಮದ ಸ್ಥಳದಲ್ಲಿ ಗೌರವ ಸಲ್ಲಿಸಲು ಒಂದು ಫಲಕವನ್ನು ಅನಾವರಣಗೊಳಿಸಿದರು.
ಫಲಕ ಅನಾವರಣಗೊಳಿಸಿದ ಪ್ರಧಾನಿ ಮೋದಿ
ಫಲಕ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಸಿಂಗಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಮಾಜಿ ಪ್ರಧಾನಿ ಗೋ ಚೋಕ್ ಟಾಂಗ್ ಅವರು ಇಂದು ರಾಜಧಾನಿ ಕ್ಲಿಫರ್ಡ್ ಪೈಯರ್ ನಲ್ಲಿ ಮಹಾತ್ಮಾ ಗಾಂಧಿಯವರ ಚಿತಾಭಸ್ಮದ ಸ್ಥಳದಲ್ಲಿ ಗೌರವ ಸಲ್ಲಿಸಲು ಸ್ಮರಣ ಫಲಕವನ್ನು ಅನಾವರಣಗೊಳಿಸಿದರು.

ನರೇಂದ್ರಮೋದಿ ಅವರ ಮೂರು ರಾಷ್ಟ್ರಗಳ ಪ್ರವಾಸದ ಕೊನೆಯ ಚರಣದಲ್ಲಿ  ಮಹಾತ್ಮ ಗಾಂಧಿ ಅವರ ಚಿತಾಭಸ್ಮವನ್ನು 1948ರಲ್ಲಿ ಮುಳುಗಿಸಿರುವ ಕಡಲ ತೀರದ ಲಿಪೊರ್ಡ್ ಪೈಯರ್ ನಲ್ಲಿಂದು ಮಹಾತ್ಮಗಾಂಧಿ ಅವರ ಫಲಕವನ್ನು ಅನಾವರಣಗೊಳಿಸಿರುವುದಾಗಿ  ನರೇಂದ್ರಮೋದಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com