ರದ್ದತಿ ಆದೇಶವನ್ನು ವಾಪಸ್ ಪಡೆದಿರುವ ಸಿರಿಸೇನಾ, ನ.೦5 ಕ್ಕೆ ಲಂಕಾ ಸಂಸತ್ ಕಲಾಪಕ್ಕೆ ಕರೆ ನೀಡಿದ್ದಾರೆ. ಪ್ರಧಾನಿ ಹುದ್ದೆ ಸಂಬಂಧ ರಾನಿಲ್ ವಿಕ್ರಮಸಿಂಘೆ ಹಾಗೂ ರಾಜಪಕ್ಸೆ ಅವರ ನಡುವಿನ ತಿಕ್ಕಾಟ ನ.05 ರ ಕಲಾಪದಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಇದೆ. ರಾಜಕೀಯ ಬಿಕ್ಕಟ್ಟು ಸೃಷ್ಟಿಯಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಸಂಸತ್ ತುರ್ತು ಕಲಾಪವನ್ನು ನವೆಂಬರ್ 16ರ ವರೆಗೆ ಅಮಾನತುಗೊಳಿಸಿ ಆದೇಶ ನೀಡಿದ್ದರು.