ಮಾರನೆಯ ದಿನವೂ ಮೀನುಗಾರರೊಂದಿಗೆ ದ್ವೀಪಕ್ಕೆ ತೆರಳಿದ್ದ ಚೌಗೆ ಅಲ್ಲಿನ ಬುಡುಕಟ್ಟು ಜನರು ಬಿಲ್ಲು ಬಾಣಗಳ ದಾಳಿ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಅಂದು ಬುಡುಕಟ್ಟು ಜನಾಂಗದ ಯುವಕನೋರ್ವ ಹಾರಿಸಿದ್ದ ಬಾಣ ನೇರವಾಗಿ ಚೌ ಎದೆ ಸೀಳುತ್ತಿತ್ತು. ಆದರೆ ಚೌ ಎದೆಗವಿಚಿಕೊಂಡಿದ್ದ ಬೈಬಲ್ ಗೆ ಬಾಣ ತಗುಲಿ ಆತ ಪ್ರಾಣಾಪಾಯದಿಂದ ಪಾರಾಗಿದ್ದ. ಬಳಿಕ ಅಲ್ಲಿಂದ ಆತ ಹೊರಟು ಹೋಗಿದ್ದ. ಬಳಿಕ ನವೆಂಬರ್ 18ರಂದು ಶತಾಯಗತಾಯ ಬುಡಕಟ್ಟು ನಿವಾಸಿಗಳನ್ನು ಭೇಟಿ ಮಾಡಲೇಬೇಕು ಎಂದು ನಿರ್ಧರಿಸಿದ್ದ ಚೌ ದ್ಪೀಪದತ್ತ ತೆರಳಿದ್ದ, ಅಂದು ಆತನಿಗೆ ತನ್ನ ಸಾವಿನ ಶಂಕೆ ಮೂಡಿತ್ತು. ಈ ಬಗ್ಗೆಯೂ ಆತ ತನ್ನ ಡೈರಿಯಲ್ಲಿ ಬರೆದುಕೊಂಡಿದ್ದು, ಏಸುವಿನ ಪ್ರೀತಿಯನ್ನು ಆ ಬುಡಕಟ್ಟು ಜನರಿಗೆ ಹಂಚಲು ಹೋಗುತ್ತಿದ್ದೇನೆ. ಅವರೂ ಕೂಡ ನಮ್ಮಂತೆಯೇ ಸಾಮಾನ್ಯ ಜೀವನ ಸಾಗಿಸಬೇಕು. ಆದರೆ ನಾನು ಅಲ್ಲಿಂದ ಬದುಕಿ ವಾಪಸ್ ಬರುತ್ತೇನೆಯೋ ತಿಳಿದ್ಲಲ್ಲ. ಆದರೆ ನಾನು ಬದುಕ ಬೇಕು ಎಂದು ಚೌ ತನ್ನ ಡೈರಿಯಲ್ಲಿ ಬರೆದುಕೊಂಡಿದ್ದ. ಈ ಡೈರಿಯನ್ನು ಚೌ ಅವರ ತಾಯಿ ತಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿಯಲ್ಲಿ ಬರೆದಿದೆ.