ತಬ್ರೇಜ್ ಅನ್ಸಾರಿ ಹಲ್ಲೆಯಿಂದ ಸತ್ತಿಲ್ಲ, ಹೃದಯಸ್ತಂಭನದಿಂದ ಸತ್ತಿದ್ದು: ಪೊಲೀಸ್ ವರದಿ, 11 ಆರೋಪಿಗಳು ಖುಲಾಸೆ! 

ಗುಂಪು ಹಲ್ಲೆಗೆ ಗುರಿಯಾಗಿದ್ದ ತಬ್ರೇಜ್ ಅನ್ಸಾರಿ ಎಂಬ ಯುವಕ ಹಲ್ಲೆಯಿಂದ ಸಾವನ್ನಪ್ಪಿಲ್ಲ ಆತ ಮೃತಪಟ್ಟಿರುವುದು ಹೃದಯಸ್ತಂಭನದಿಂದ ಎಂದು ಜಾರ್ಖಂಡ್ ಪೊಲೀಸರು ಹೇಳಿದ್ದಾರೆ. 
ತಬ್ರೇಜ್ ಅನ್ಸಾರಿ ಹಲ್ಲೆಯಿಂದ ಸತ್ತಿಲ್ಲ, ಹೃದಯಸ್ತಂಭನದಿಂದ ಸತ್ತಿದ್ದು: ಪೊಲೀಸ್ ವರದಿ, 11 ಆರೋಪಿಗಳು ಖುಲಾಸೆ!
ತಬ್ರೇಜ್ ಅನ್ಸಾರಿ ಹಲ್ಲೆಯಿಂದ ಸತ್ತಿಲ್ಲ, ಹೃದಯಸ್ತಂಭನದಿಂದ ಸತ್ತಿದ್ದು: ಪೊಲೀಸ್ ವರದಿ, 11 ಆರೋಪಿಗಳು ಖುಲಾಸೆ!
Updated on

ಜಾರ್ಖಂಡ್: ಗುಂಪು ಹಲ್ಲೆಗೆ ಗುರಿಯಾಗಿದ್ದ ತಬ್ರೇಜ್ ಅನ್ಸಾರಿ ಎಂಬ ಯುವಕ ಹಲ್ಲೆಯಿಂದ ಸಾವನ್ನಪ್ಪಿಲ್ಲ ಆತ ಮೃತಪಟ್ಟಿರುವುದು ಹೃದಯಸ್ತಂಭನದಿಂದ ಎಂದು ಜಾರ್ಖಂಡ್ ಪೊಲೀಸರು ಹೇಳಿದ್ದಾರೆ. 

ಪೊಲೀಸರು ಈ ಬಗ್ಗೆ ವರದಿ ನೀಡಿದ್ದು ಪ್ರಕರಣಕ್ಕೆ ಸಂಬಂಧಿಸಿದ 11 ಶಂಕಿತರನ್ನು ಪ್ರಕರಣದಿಂದ ಕೈಬಿಡಲಾಗಿದೆ. ಜೂನ್ 19 ರಲ್ಲಿ ಜಾರ್ಖಂಡ್ ನ ಧತ್ಕಿಡ್ ನಲ್ಲಿ ತಬ್ರೇಜ್ ಎಂಬ ವ್ಯಕ್ತಿಯನ್ನು ಕಳ್ಳತನದ ಆರೋಪದಡಿ ಗುಂಪು ಹಲ್ಲೆ ನಡೆಸಲಾಗಿತ್ತು. ತಬ್ರೇಜ್ ಬೈಕ್ ಕದ್ದಿದ್ದಾನೆ ಎಂದು ಶಂಕಿಸಿ ಹಿಗ್ಗಾ-ಮುಗ್ಗಾ ಥಳಿಸಿದ್ದರು. ಹಲ್ಲೆ ನಡೆಸಿದ ಬೆನ್ನಲ್ಲೇ ತಬ್ರೇಜ್ ಸಾವನ್ನಪ್ಪಿದ್ದ.

ಈ ಘಟನೆ ನಡೆದ ಬೆನ್ನಲ್ಲೇ ಮುಖ್ಯಮಂತ್ರಿ ರಘುಬರ್ ದಾಸ್ ಎಸ್ ಐಟಿ ತನಿಖೆಗೆ ಆದೇಶಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com