ಕಡ್ಡಾಫಿ ಸ್ಟೇಡಿಯಂ ನಲ್ಲಿ ಪ್ರಾರ್ಥನೆ ಸಲ್ಲಿಸುವಂತಿಲ್ಲ, ಒಂದು ವೇಳೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಹೋದದ್ದೇ ಆದರೆ ಬಂಧಿಸಲಾಗುವುದು ಎಂಬ ಎಚ್ಚರಿಕೆಯನ್ನು ಪಂಜಾಬ್ ಸರ್ಕಾರ ರವಾನೆ ಮಾಡಿತ್ತು. ಬೇರೆ ಮಾರ್ಗವಿಲ್ಲದೇ ಹಫೀದ್ ಸಯೀದ್ ತನ್ನ ನೆಚ್ಚಿನ ಸ್ಥಳದ ಬದಲು ಮನೆಯ ಬಳಿಯೇ ಇದ್ದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾನೆ. ಹಫೀಜ್ ಸಯೀದ್ ಈ ವರೆಗೂ ಆತ ಪ್ರತಿ ವರ್ಷದ ಈದ್ ಪ್ರಾರ್ಥನೆಯನ್ನು ಯಾವುದೇ ಹಿಂಜರಿಕೆ ಇಲ್ಲದೇ ಕಡ್ಡಾಫಿ ಸ್ಟೇಡಿಯಂ ನಲ್ಲೇ ಮುಂದುವರೆಸುತ್ತಿದ್ದ.