ಫೆಬ್ರವರಿ 26ರ ಬಾಲ್ ಕೋಟ್ ಜೈಶ್-ಇ-ಮೊಹಮ್ಮದ್ (ಜೆಎಂ) ಭಯೋತ್ಪಾದನಾ ಶಿಬಿರದ ಮೇಲೆ ಭಾರತೀಯ ವಾಯುಪಡೆ ನಡೆಸಿದ್ದ ಏರ್ ಸ್ಟ್ರೈಕ್ ನಂತರ ಪಾಕಿಸ್ತಾನ ಭಾರತದ ಪಾಲಿಗೆ ತನ್ನ ವಾಯುಪ್ರದೇಶವನ್ನು ಸಂಪೂರ್ಣ ಬಂದ್ ಮಾಡಿದೆ.ಆದರೆ ಮಾರ್ಚ್ 27ರಿಂದ ಪಾಕಿಸ್ತಾನ ನವದೆಹಲಿ, ಕೌಲಾಲಾಂಪುರ್, ಬಾಂಕಾಕ್ ಹೊರತು ಬೇರೆಲ್ಲಾ ಪ್ರದೇಶಗಳಿಗೆ ತೆರಳುವ ವಿಮಾನಕ್ಕೆ ತನ್ನ ವಾಯುಪ್ರದೇಶವನ್ನು ಮುಕ್ತವಾಗಿಸಿದೆ.