ನೇಪಾಳ ಲಾಕ್ ಡೌನ್: ಸೈಕಲ್ ಕಮರಿಗೆ ಬಿದ್ದು, ತಾಯ್ನಾಡಿಗೆ ವಾಪಸ್ಸಾಗುತ್ತಿದ್ದ ಇಬ್ಬರು ಬಿಹಾರಿಗಳ ದುರ್ಮರಣ

ಕೊರೋನಾವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೈಸಿಕಲ್ ಒಂದರಲ್ಲಿ ಬಿಹಾರದ ಯುವಕರಿಬ್ಬರು ವಾಪಸ್ ಆಗುತ್ತಿದ್ದಾಗ ಕಡಿದಾದ ಕಮರಿಯೊಂದಕ್ಕೆ ಸೈಕಲ್ ಬಿದ್ದು ದುರ್ಮರಣ ಹೊಂದಿರುವ ಘಟನೆ ಇಂದು ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕಠ್ಮಂಡು: ಕೊರೋನಾವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೈಸಿಕಲ್ ಒಂದರಲ್ಲಿ ಬಿಹಾರದ ಯುವಕರಿಬ್ಬರು ವಾಪಸ್ ಆಗುತ್ತಿದ್ದಾಗ ಕಡಿದಾದ ಕಮರಿಯೊಂದಕ್ಕೆ ಸೈಕಲ್ ಬಿದ್ದು ದುರ್ಮರಣ ಹೊಂದಿರುವ ಘಟನೆ ಇಂದು ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಕೇಶ್ ಗುಪ್ತಾ ಮತ್ತು ಸಂತೋಷ್ ಮೆಹ್ತಾ ಮೃತ ದುರ್ದೈವಿಗಳು, ಇವರಿಬ್ಬರು ಲಲಿತ್ ಪುರದಲ್ಲಿ ಹಳೆಯ ಪತ್ರಿಕೆಗಳು, ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಸಂಗ್ರಹಿಸುವ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. 

ಬಿಹಾರದ ಮೊತಿಹರಿಗೆ ಸೈಕಲ್ ನಲ್ಲಿ ಬರುತ್ತಿದ್ದಾಗ 150 ಮೀಟರ್ ಆಳವಾದ ಕಡಿದಾದ ಕಮರಿಗೆ ಬಿದ್ದು ಅವರು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಮೂರು ವಾರಗಳ ನಂತರವೂ ಲಾಕ್ ಡೌನ್ ಮುಂದುವರೆಕೆಯಾಗಿರುವುದರಿಂದ ಹಣವಿಲ್ಲದೆ  ಎರಡು ಬೈಸಿಕಲ್ ನಲ್ಲಿ ನಾಲ್ವರು ತಾಯ್ನಾಡಿಗೆ ವಾಪಸ್ಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮತ್ತಿಬ್ಬರು ಸುರಕ್ಷಿತವಾಗಿ ಬಿಹಾರದ ಮೊತಿಹರಿಗೆ ತಲುಪಿದ್ದಾರೆ ಎನ್ನಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com