ಅಫ್ಘಾನಿಸ್ತಾನದಲ್ಲಿ ಜೀವಿಸಿ ಬೇಸತ್ತಿದ್ದೇವೆ, ಐಎಸ್ ದಾಳಿಯ ಬಗ್ಗೆ ತನಿಖೆಗೆ ಆಗ್ರಹಿಸಿದ ಸಿಖ್ ಸಮುದಾಯ  

ಅಫ್ಘಾನಿಸ್ತಾನದಲ್ಲಿ ಜೀವಿಸಿ ಬೇಸತ್ತಿದ್ದೇವೆ, ಐಎಸ್ ದಾಳಿಯ ಬಗ್ಗೆ ತನಿಖೆಗೆ ಆಗ್ರಹಿಸಿದ ಸಿಖ್ ಸಮುದಾಯ  

ಕಾಬೂಲ್ ನ ಗುರುದ್ವಾರದಲ್ಲಿ ಭಯೋತ್ಪಾದಕ ದಾಳಿಗೆ ಬಲಿಯಾದವರ ಕುಟುಂಬಗಳು ಅಫ್ಘಾನಿಸ್ತಾನದಲ್ಲಿ ಜೀವಿಸಿ ಬೇಸತ್ತಿದ್ದೇವೆ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದು, ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಯ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ. 
Published on

ಕಾಬೂಲ್: ಕಾಬೂಲ್ ನ ಗುರುದ್ವಾರದಲ್ಲಿ ಭಯೋತ್ಪಾದಕ ದಾಳಿಗೆ ಬಲಿಯಾದವರ ಕುಟುಂಬಗಳು ಅಫ್ಘಾನಿಸ್ತಾನದಲ್ಲಿ ಜೀವಿಸಿ ಬೇಸತ್ತಿದ್ದೇವೆ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದು, ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಯ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ. 

ಮಾ.25 ರಂದು ಅಫ್ಘಾನಿಸ್ತಾನದ ರಾಜಧಾನಿ ಕಬೂಲ್ ನ ಪ್ರಮುಖ ಗುರುದ್ವಾರಕ್ಕೆ ನುಗ್ಗಿದ್ದ ಶಸ್ತ್ರಸಜ್ಜಿತ ಇಸ್ಲಾಮಿಕ್ ಸ್ಟೇಟ್ ನ ಆತ್ಮಾಹುತಿ ದಾಳಿ ಬಾಂಬರ್ ನಡೆಸಿದ ದಾಳಿಯಲ್ಲಿ 25 ಸಿಖ್ ಜನಾಂಗದವರು ಸಾವನ್ನಪ್ಪಿದ್ದರು. 8 ಜನ ಗಾಯಗೊಂಡಿದ್ದರು. ಸಾವನ್ನಪ್ಪಿದವರ ಅಂತ್ಯಕ್ರಿಯೆ ವೇಳೆಯಲ್ಲೂ ಸಹ ಭಯೋತ್ಪಾದಕರ ದಾಳಿ ನಡೆದಿದ್ದು, ಕುಟುಂಬ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅಫ್ಘಾನಿಸ್ತಾನದಲ್ಲಿ ಜೀವಿಸಿ ಬೇಸತ್ತಿದ್ದೇವೆ, ಐಎಸ್ ದಾಳಿಯ ಬಗ್ಗೆ ತನಿಖೆ ನಡೆಯಲಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com