ಸಿಖ್ಖರ ಗುರುದ್ವಾರದ ಮೇಲೆ ಭೀಕರ ಉಗ್ರ ದಾಳಿ, 25 ಮಂದಿ ದುರ್ಮರಣ!

ಶಸ್ತ್ರಸಜ್ಜಿತ ಉಗ್ರರು ಸಿಖ್ ಗುರುದ್ವಾರ ಮೇಲೆ ನಡೆಸಿದ ಉಗ್ರ ದಾಳಿಯಲ್ಲಿ 25 ಮಂದಿ ಸಾವನ್ನಪ್ಪಿದ್ದು 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಶಸ್ತ್ರಸಜ್ಜಿತ ಉಗ್ರರು ಸಿಖ್ ಗುರುದ್ವಾರ ಮೇಲೆ ನಡೆಸಿದ ಉಗ್ರ ದಾಳಿಯಲ್ಲಿ 25 ಮಂದಿ ಸಾವನ್ನಪ್ಪಿದ್ದು 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 

ಕಾಬೂಲ್ ನ ಶೋರ್ ಬಜಾರ್ ಪ್ರದೇಶದಲ್ಲಿನ ಗುರುದ್ವಾರದ ಮೇಲೆ ಬಂದೂಕುಧಾರಿಗಳ ಗುಂಪು ಭಾರೀ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಿದ್ದು 25 ಮಂದಿ ಸಾವನ್ನಪ್ಪಿದ್ದಾರೆ.

ಉಗ್ರ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಗುಂಪು ವಹಿಸಿಕೊಂಡಿದೆ. ಎಸ್ಐಟಿ ಗುಪ್ತಚರ ಪ್ರಕಾರ, ಐಎಸ್ಕೆಪಿಯನ್ನು ಬೆಂಬಲಿಸುತ್ತಿರುವ ಪಾಕಿಸ್ತಾನದ ಐಎಸ್ಐ ಈ ಮಾರಣಾಂತಿಕ ದಾಳಿಯನ್ನು ಆಯೋಜಿಸಿದೆ ಎಂದು ಭಾರತೀಯ ಭದ್ರತಾ ಸಂಸ್ಥೆಗಳು ನಂಬಿವೆ. 

ಈ ಭೀಕರ ಉಗ್ರ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com