The New Indian Express
ಕಾಬೂಲ್: ತಾಲಿಬಾನಿಗಳು ಕಾಬೂಲನ್ನು ಸುತ್ತುವರಿದಾಗವರೊಡನೆ ಹೋರಾಟ ನಡೆಸುವುದಕ್ಕೆ ಬದಲಾಗಿ ಅಧಿಕಾರಿಗಳು ಭೂಗತರಾದ ಬಗ್ಗೆ ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಅವರು ಬಹಿರಂಗ ಪಡಿಸಿದ್ದಾರೆ.
ಪಂಜ್ ಶೀರ್ ಕಣಿವೆಯಲ್ಲಿ ತಾಲಿಬಾನಿಗಳ ವಿರುದ್ಧ ಹುಟ್ಟಿಕೊಂಡಿರುವ ಎನ್ ಆರ್ ಎಫ್(ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್) ಪಡೆಯ ನೇತೃತ್ವವನ್ನು ಸಲೇಹ್ ಅವರು ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಉಗ್ರಸಂಘಟನೆಯಿಂದ ಸುಸೈಡ್ ಬಾಂಬ್ ದಾಳಿ: ಮೂವರು ಸೈನಿಕರು ಸಾವು
ಅಫ್ಘಾನಿಸ್ತಾನದ ನಾಯಕರು ತಾಲಿಬಾನಿಗಳ ವಿರುದ್ಧ ಹೋರಾಡದೆ ದೇಶವನ್ನು ಅವರ ಕೈಗೊಪ್ಪಿಸಿ ಪರಾರಿಯಾಗಿದ್ದರ ವಿರುದ್ಧ ಸಲೇಹ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ದೇಶ ತೊರೆದಾಗ ತಾವು ದೇಶದ ರಕ್ಷಣೆಗಾಗಿ ಇನ್ನೂ ಜೀವಂತ ಇರುವುದಾಗಿ ಹೇಳಿ ಸಲೇಹ್ ಸುದ್ದಿಯಾಗಿದ್ದರು.
ಇದನ್ನೂ ಓದಿ: ತಾಲಿಬಾನ್ ಅಳ್ವಿಕೆಯ ನಡುವೆಯೇ ಬಾಂಗ್ಲಾದೇಶ ತಲುಪಿದ ಅಫ್ಘಾನಿಸ್ತಾನ ಕ್ರಿಕೆಟ್ ತಂಡ
ಇದೀಗ ತಾಲಿಬಾನಿಗಳಿಗೆ ತೀಕ್ಷ್ಣ ಎಚ್ಚರಿಕೆ ನೀಡಿರುವ ಅಮ್ರುಲ್ಲಾ ಸಲೇಹ್ ಅವರು, ಯಾವುದೇ ಕಾರಣಕ್ಕೂ ತಾವು ತಾಲಿಬಾನಿಗಳಿಗೆ ಶರಣಾಗುವ ಪರಿಸ್ಥಿತಿ ತಂದುಕೊಳ್ಳುವುದಿಲ್ಲ ಎಂದು ಖಡಾಖಂಡಿತವಾಗಿ ಘೋಷಿಸಿದ್ದಾರೆ.
ಒಂದುವೇಳೆ ತಾಲಿಬಾನಿಗಳು ತಮ್ಮನ್ನು ವಶಕ್ಕೆ ಪಡೆಯುವ ಸಂದರ್ಭ ಬಂದರೆ ತಮ್ಮ ತಲೆಗೆ ಎರಡು ಬಾರಿ ಗುಂಡಿಕ್ಕಿ ಕೊಲ್ಲುವಂತೆ ಈಗಾಗಲೇ ತಮ್ಮ ಬಾಡಿ ಗಾರ್ಡಿಗೆ ಆದೇಶ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಉಗ್ರರಿಗೆ ಬಗ್ಗದ ಹೋರಾಟಗಾರರು: ಪಂಜಶಿರ್ ನಲ್ಲಿ 600ಕ್ಕೂ ಹೆಚ್ಚು ತಾಲಿಬಾನಿಗಳ ಹತ್ಯೆ!