ಲಂಡನ್: ಬಸವೇಶ್ವರ ಪುತ್ಥಳಿಗೆ ರಾಹುಲ್ ಗೌರವ ನಮನ

ಒಂದು ವಾರ ಲಂಡನ್ ಪ್ರವಾಸದಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಗುರು ಬಸವೇಶ್ವರರ ಪುತ್ಥಳಿಗೆ ಗೌರವ ನಮನ ಸಲ್ಲಿಸಿದ್ದಾರೆ. ಫೇಸ್ ಬುಕ್ ಫೇಜ್ ನಲ್ಲಿ ಈ ಕುರಿತ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.
ಬಸವೇಶ್ವರರ ಪುತ್ಥಳಿಗೆ ನಮಿಸುತ್ತಿರುವ ರಾಹುಲ್ ಗಾಂಧಿ
ಬಸವೇಶ್ವರರ ಪುತ್ಥಳಿಗೆ ನಮಿಸುತ್ತಿರುವ ರಾಹುಲ್ ಗಾಂಧಿ
Updated on

ಲಂಡನ್:  ಒಂದು ವಾರ ಲಂಡನ್ ಪ್ರವಾಸದಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಗುರು ಬಸವೇಶ್ವರರ ಪುತ್ಥಳಿಗೆ ಗೌರವ ನಮನ ಸಲ್ಲಿಸಿದ್ದಾರೆ. ಫೇಸ್ ಬುಕ್ ಫೇಜ್ ನಲ್ಲಿ ಈ ಕುರಿತ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.

ಭಾರತದ ಮೂಲ ಮೌಲ್ಯಗಳಾದ  ಸತ್ಯ, ಕರುಣೆ, ಅಹಿಂಸೆ ಮತ್ತು ಸೌಹಾರ್ದತೆ ಇಡೀ ವಿಶ್ವಕ್ಕೆ ಮತ್ತೆ ಪ್ರೇರಣೆಯಾಗಿದೆ. ಲಂಡನ್ ನಲ್ಲಿ ಭಾರತದ ಹೆಮ್ಮೆಯ ಮಕ್ಕಳಾದ ಮಹಾತ್ಮ ಗಾಂಧಿ ಮತ್ತು ಗುರು ಬಸವಣ್ಣ ಅವರಿಗೆ ನಮನ ಸಲ್ಲಿಸಿದ್ದಾಗಿ ಅವರು ಬರೆದುಕೊಂಡಿದ್ದಾರೆ.

ಲಂಡನ್ ನಲ್ಲಿ ಭಾರತೀಯ ಪತ್ರಕರ್ತರ ಒಕ್ಕೂಟದೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ. ದೇಶಕ್ಕಾಗಿ ವಿಪಕ್ಷಗಳ ಮಹಾಮೈತ್ರಿ ರಚನೆಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದರು.   

ದೇಶದಲ್ಲಿ ಧ್ವನಿ ಅಡಗಿಸುವ ಬಿಜೆಪಿ ಪ್ರಯತ್ನದ ವಿರುದ್ಧ ಧ್ವನಿ ಎತ್ತಲಾಗುತ್ತಿದೆ. ಭಾರತದಲ್ಲಿ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮಾಧ್ಯಮಗಳು, ನ್ಯಾಯಾಂಗ ಮತ್ತು ಸಂಸತ್ತು ಕೂಡಾ ದಾಳಿಗೆ ಒಳಗಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com