ಕೆನಡಾ: ಪ್ರತಿಭಟನೆಯಲ್ಲಿ ಭಾಗಿಯಾದ ಆರೋಪ; ಹಿಂದೂ ದೇವಾಲಯದ ಅರ್ಚಕ ಅಮಾನತು

ಭಾರತೀಯ ಪಿಂಚಣಿದಾರರಿಗೆ ಪ್ರಮಾಣಪತ್ರಗಳನ್ನು ನೀಡಲು ಯೋಜಿಸಲಾಗಿದ್ದ ಕಾನ್ಸುಲರ್ ಶಿಬಿರಗಳನ್ನು ಭದ್ರತಾ ಕಾರಣಗಳಿಗಾಗಿ ರದ್ದುಗೊಳಿಸಲಾಗಿದೆ.
Protest in  Brampton
ಬ್ರಾಂಪ್ಟನ್ ನಲ್ಲಿ ನಡೆದ ಪ್ರತಿಭಟನೆ
Updated on

ಚಂಡೀಗಢ: ಭಾನುವಾರ ಬ್ರಾಂಪ್ಟನ್‌ನ ಹಿಂದೂ ಸಭಾ ಮಂದಿರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಅರ್ಚಕ ರಾಜಿಂದರ್ ಪರ್ಸಾದ್ ಅವರನ್ನು ಹಿಂದೂ ಸಭಾ ದೇವಾಲಯದ ಆಡಳಿತ ಮಂಡಳಿ ಅಮಾನತುಗೊಳಿಸಿದೆ.

ದೇವಾಲಯದ ಆವರಣದಲ್ಲಿರುವ ಹಿಂದೂ ಸಭಾ ದೇವಾಲಯದಲ್ಲಿ ಖಾಲಿಸ್ತಾನಿ ಪರ ಪ್ರತಿಭಟನಾಕಾರರು ಮತ್ತು ಜನರ ನಡುವಿನ ಘರ್ಷಣೆಯ ನಂತರ ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಕಾನ್ಸುಲರ್ ಶಿಬಿರಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ಪಿಂಚಣಿದಾರರಿಗೆ ಪ್ರಮಾಣಪತ್ರಗಳನ್ನು ನೀಡಲು ಯೋಜಿಸಲಾಗಿದ್ದ ಕಾನ್ಸುಲರ್ ಶಿಬಿರಗಳನ್ನು ಭದ್ರತಾ ಕಾರಣಗಳಿಗಾಗಿ ರದ್ದುಗೊಳಿಸಲಾಗಿದೆ. ಖಲಿಸ್ತಾನಿ ಉಗ್ರರ ಇತ್ತೀಚಿನ ಹಿಂಸಾಚಾರದ ನಂತರ ಸೂಕ್ತ ರಕ್ಷಣೆ ನೀಡಲು ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ.

ಸಮುದಾಯ ಶಿಬಿರ ಸಂಘಟಕರಿಗೆ ಕನಿಷ್ಠ ಭದ್ರತಾ ರಕ್ಷಣೆಯನ್ನು ಒದಗಿಸಲು ಭದ್ರತಾ ಏಜೆನ್ಸಿಗಳಿಗೆ ಸಾಧ್ಯವಾಗಲಿಲ್ಲ, ಹೀಗಾಗಿ ಸುರಕ್ಷತಾ ದೃಷ್ಟಿಯಿಂದ ಕಾನ್ಸುಲೇಟ್ ಕೆಲವು ನಿಗದಿತ ಶಿಬಿರಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ. ಭಾರತೀಯ ದೂತಾವಾಸ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ನಂತರ ಅರ್ಚಕರನ್ನು ಅಮಾನತುಗೊಳಿಸಲು ಆದೇಶವನ್ನು ಹೊರಡಿಸಲಾಗಿದೆ. “ನವೆಂಬರ್ 3, 2024 ರಂದು ಹಿಂದೂ ಸಭಾದ ಆವರಣದಲ್ಲಿ ಅನುಮತಿಯಿಲ್ಲದೆ ಪ್ರತಿಭಟನಾಕಾರರೊಂದಿಗೆ ಭಾಗಿಯಾಗಿದ್ದಕ್ಕೆ ಹಿಂದೂ ಸಭಾ ಅರ್ಚಕ ರಾಜಿಂದರ್ ಪರ್ಸಾದ್ ಅವರನ್ನು ಹಿಂದೂ ಸಭಾವು ಅಮಾನತುಗೊಳಿಸಿದೆ, ಈ ನಿರ್ಧಾರ ತಕ್ಷಣದಿಂದಲೇ ಜಾರಿಯಾಗಲಿದೆ ಎಂದು ಬ್ರಾಂಪ್ಟನ್‌ನ ಹಿಂದೂ ಸಭಾ ದೇವಾಲಯದ ಅಧ್ಯಕ್ಷ ಮಧುಸೂದನ್ ಲಾಮಾ ಅವರು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

Protest in  Brampton
ಖಲಿಸ್ತಾನಿಗಳ ದಾಳಿ ಖಂಡಿಸಿ ಕೆನಡಾ ಹಿಂದೂ ಭಕ್ತರ ಬೃಹತ್ ಪ್ರತಿಭಟನೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com