ಭಾರತ ಮತ್ತೊಂದು ಮೈಲಿಗಲ್ಲು: ತೀವ್ರ ಬಡತನದ ಪ್ರಮಾಣ ಭಾರಿ ಇಳಿಕೆ; ವಿಶ್ವಬ್ಯಾಂಕ್ ಮೆಚ್ಚುಗೆ!

2022-23ರ ಅವಧಿಯಲ್ಲಿ ಭಾರತದಲ್ಲಿ ಸುಮಾರು 75.24 ಮಿಲಿಯನ್ ಜನರು ತೀವ್ರ ಬಡತನದಲ್ಲಿ ವಾಸಿಸುತ್ತಿದ್ದರು. ಈ ಪ್ರಮಾಣ 2011-12ರಲ್ಲಿ 344.47 ಮಿಲಿಯನ್‌ ಗೆ ಹೋಲಿಸಿದರೆ ಭಾರಿ ಇಳಿಕೆ ಕಂಡಿದೆ.
Extreme Poverty Rate
ತೀವ್ರ ಬಡತನ (ಸಾಂಕೇತಿಕ ಚಿತ್ರ)online desk
Updated on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಸರ್ಕಾರ ಮಹತ್ವದ ಸಾಧನೆ ಮಾಡಿದ್ದು, ಭಾರತ ಕಳೆದ ದಶಕದಲ್ಲಿ ತನ್ನ ತೀವ್ರ ಬಡತನದ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪ್ರಗತಿ ಸಾಧಿಸಿದೆ.

2011-12ರಲ್ಲಿ ಶೇಕಡಾ 27.1 ರಷ್ಟಿದ್ದ ತೀವ್ರ ಬಡತನ ಪ್ರಮಾಣ 2022-23ರಲ್ಲಿ ಶೇಕಡಾ 5.3 ಕ್ಕೆ ಇಳಿದಿದೆ ಎಂದು ವಿಶ್ವಬ್ಯಾಂಕ್‌ನ ಇತ್ತೀಚಿನ ದತ್ತಾಂಶ ಬಹಿರಂಗಪಡಿಸಿದೆ.

2022-23ರ ಅವಧಿಯಲ್ಲಿ ಭಾರತದಲ್ಲಿ ಸುಮಾರು 75.24 ಮಿಲಿಯನ್ ಜನರು ತೀವ್ರ ಬಡತನದಲ್ಲಿ ವಾಸಿಸುತ್ತಿದ್ದರು. ಈ ಪ್ರಮಾಣ 2011-12ರಲ್ಲಿ 344.47 ಮಿಲಿಯನ್‌ ಗೆ ಹೋಲಿಸಿದರೆ ಭಾರಿ ಇಳಿಕೆ ಕಂಡಿದೆ.

ವಿಶ್ವಬ್ಯಾಂಕ್ ದತ್ತಾಂಶದ ಪ್ರಕಾರ, ಸುಮಾರು 11 ವರ್ಷಗಳಲ್ಲಿ 269 ಮಿಲಿಯನ್ ವ್ಯಕ್ತಿಗಳನ್ನು ತೀವ್ರ ಬಡತನದಿಂದ ಮೇಲಕ್ಕೆತ್ತಲಾಗಿದೆ.

2011-12ರಲ್ಲಿ ಭಾರತದ ತೀವ್ರ ಬಡವರಲ್ಲಿ ಒಟ್ಟಾರೆಯಾಗಿ ಶೇಕಡಾ 65 ರಷ್ಟಿದ್ದ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶಗಳು 2022-23ರ ವೇಳೆಗೆ ಒಟ್ಟಾರೆ ತೀವ್ರ ಬಡತನದ ಕುಸಿತದ ಮೂರನೇ ಎರಡರಷ್ಟು ಕೊಡುಗೆ ನೀಡಿವೆ.

"ಸಂಪೂರ್ಣವಾಗಿ ಹೇಳುವುದಾದರೆ, ತೀವ್ರ ಬಡತನದಲ್ಲಿ ವಾಸಿಸುವ ಜನರ ಸಂಖ್ಯೆ 344.47 ಮಿಲಿಯನ್‌ನಿಂದ ಕೇವಲ 75.24 ಮಿಲಿಯನ್‌ಗೆ ಇಳಿದಿದೆ" ಎಂದು ವಿಶ್ವ ಬ್ಯಾಂಕಿನ ಇತ್ತೀಚಿನ ಡೇಟಾವನ್ನು ತೋರಿಸಿದೆ. ಅಂತರರಾಷ್ಟ್ರೀಯ ಬಡತನ ರೇಖೆ (2021 ರ ಬೆಲೆಗಳನ್ನು ಬಳಸಿಕೊಂಡು) ದಿನಕ್ಕೆ $3.00 ಆಧರಿಸಿದ ವಿಶ್ವ ಬ್ಯಾಂಕಿನ ಮೌಲ್ಯಮಾಪನವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿಶಾಲ ಆಧಾರಿತ ಕಡಿತವನ್ನು ತೋರಿಸುತ್ತದೆ.

ಕಳೆದ 11 ವರ್ಷಗಳಲ್ಲಿ ಗ್ರಾಮೀಣ ತೀವ್ರ ಬಡತನ ಶೇಕಡಾ 18.4 ರಿಂದ ಶೇಕಡಾ 2.8ಕ್ಕೆ ಮತ್ತು ನಗರ ತೀವ್ರ ಬಡತನ ಶೇಕಡಾ 10.7 ರಿಂದ ಶೇಕಡಾ 1.1 ಕ್ಕೆ ಇಳಿದಿದೆ. ಇದಲ್ಲದೆ, ಬಹು ಆಯಾಮದ ಬಡತನವನ್ನು ಕಡಿಮೆ ಮಾಡುವಲ್ಲಿ ಭಾರತವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.

ಬಹು ಆಯಾಮದ ಬಡತನ ಸೂಚ್ಯಂಕ (MPI) 2005-06 ರಲ್ಲಿ ಶೇಕಡಾ 53.8 ರಿಂದ 2019-21 ರ ವೇಳೆಗೆ ಶೇಕಡಾ 16.4 ಕ್ಕೆ ಇಳಿದಿದೆ ಮತ್ತು 2022-23 ರಲ್ಲಿ ಶೇಕಡಾ 15.5 ಕ್ಕೆ ಇಳಿದಿದೆ.

Extreme Poverty Rate
ಉತ್ಪಾದನಾ ರಫ್ತು ಕ್ಷೇತ್ರ: ಭಾರತವನ್ನೇ ಹಿಂದಿಕ್ಕುತ್ತಿವೆ ಬಾಂಗ್ಲಾದೇಶ, ವಿಯೆಟ್ನಾಂನಂತಹ ಸಣ್ಣ ದೇಶಗಳು- World Bank

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ 11 ವರ್ಷಗಳನ್ನು ಪೂರೈಸುತ್ತಿರುವಾಗ, ಬಡತನದಿಂದ ಜನರನ್ನು ಮೇಲಕ್ಕೆತ್ತಲು ಕೇಂದ್ರವು ತೆಗೆದುಕೊಂಡಿರುವ ಮಹತ್ವದ ಕ್ರಮಗಳನ್ನು ಮತ್ತು ಸಬಲೀಕರಣ, ಮೂಲಸೌಕರ್ಯದತ್ತ ಸರ್ಕಾರದ ಗಮನವನ್ನು ಎತ್ತಿ ತೋರಿಸಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಜನ್ ಧನ್ ಯೋಜನೆ ಮತ್ತು ಆಯುಷ್ಮಾನ್ ಭಾರತ್‌ನಂತಹ ಉಪಕ್ರಮಗಳು ವಸತಿ, ಶುದ್ಧ ಅಡುಗೆ ಇಂಧನ, ಬ್ಯಾಂಕಿಂಗ್ ಮತ್ತು ಆರೋಗ್ಯ ರಕ್ಷಣೆಗೆ ಪ್ರವೇಶವನ್ನು ಹೆಚ್ಚಿಸಿವೆ.

ನೇರ ಪ್ರಯೋಜನ ವರ್ಗಾವಣೆ (DBT), ಡಿಜಿಟಲ್ ಸೇರ್ಪಡೆ ಮತ್ತು ಬಲಿಷ್ಠ ಗ್ರಾಮೀಣ ಮೂಲಸೌಕರ್ಯಗಳು ಪಾರದರ್ಶಕತೆ ಮತ್ತು ಕೊನೆಯ ಹಂತದವರೆಗೆ ಪ್ರಯೋಜನಗಳ ತ್ವರಿತ ವಿತರಣೆಯನ್ನು ಖಚಿತಪಡಿಸಿವೆ, 25 ಕೋಟಿಗೂ ಹೆಚ್ಚು ಜನರು ಬಡತನವನ್ನು ಹೋಗಲಾಡಿಸಲು ಈ ಅಂಶಗಳು ಸಹಾಯ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com