ಭಾರತ ದಾಳಿ ನಿಲ್ಲಿಸಿದರೆ, ಉದ್ವಿಗ್ನತೆಯನ್ನು ಕಡಿಮೆ ಮಾಡುವ ಬಗ್ಗೆ ಚಿಂತಿಸುತ್ತೇವೆ: ಪಾಕಿಸ್ತಾನ ವಿದೇಶಾಂಗ ಸಚಿವ

ಆದಾಗ್ಯೂ, ಭಾರತ ಯಾವುದೇ ದಾಳಿಗಳನ್ನು ನಡೆಸಿದರೆ, ನಮ್ಮ ದೇಶ ಕೂಡ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುತ್ತದೆ ಎಂದಿದ್ದಾರೆ.
ಇಶಾಕ್ ದಾರ್
ಇಶಾಕ್ ದಾರ್
Updated on

ಇಸ್ಲಾಮಾಬಾದ್: ಭಾರತ ಮತ್ತಷ್ಟು ದಾಳಿ ಮಾಡುವುದನ್ನು ನಿಲ್ಲಿಸಿದರೆ ತನ್ನ ದೇಶವು ಉದ್ವಿಗ್ನತೆಯನ್ನು ಕಡಿಮೆ ಮಾಡುವ ಬಗ್ಗೆ ಪರಿಗಣಿಸುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಶನಿವಾರ ಹೇಳಿದ್ದಾರೆ.

ಆದಾಗ್ಯೂ, ಭಾರತ ಯಾವುದೇ ದಾಳಿಗಳನ್ನು ನಡೆಸಿದರೆ, ನಮ್ಮ ದೇಶ ಕೂಡ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುತ್ತದೆ ಎಂದಿದ್ದಾರೆ.

ನವದೆಹಲಿಯಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ ಒಂದೆರಡು ಗಂಟೆಗಳ ನಂತರ, ಇಶಾಕ್ ದಾರ್ ಅವರು ಈ ಸಂದೇಶವನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರೊಂದಿಗೆ ಹಂಚಿಕೊಂಡಿರುವುದಾಗಿ ದಾರ್ ಪಾಕಿಸ್ತಾನದ ಜಿಯೋ ನ್ಯೂಸ್‌ಗೆ ತಿಳಿಸಿದ್ದಾರೆ.

ನಮ್ಮ ತಾಳ್ಮೆಯು ಮಿತಿ ಮೀರಿದ ಬಳಿಕವೇ ನಾವು ನಾವು ಪ್ರತಿಕ್ರಿಯಿಸಿದ್ದೇವೆ. ಅವರು ದಾಳಿ ಮಾಡುವುದನ್ನು ನಿಲ್ಲಿಸಿದರೆ, ನಾವು ಕೂಡ ದಾಳಿಯನ್ನು ನಿಲ್ಲಿಸುವ ಬಗ್ಗೆ ಪರಿಗಣಿಸುತ್ತೇವೆ ಎಂದು ಅವರು ಹೇಳಿದರು.

ಇಶಾಕ್ ದಾರ್
ಭಾರತದ ಜೊತೆಗಿನ ಸಂಘರ್ಷ ತಗ್ಗಿಸಲ್ಲ; ಸರಿಯಾದ ಸಮಯದಲ್ಲಿ ಉತ್ತರ ನೀಡುತ್ತೇವೆ: ಪಾಕಿಸ್ತಾನ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com