ಭಾರತ-ಪಾಕ್ ಕದನ ವಿರಾಮ ಬೆನ್ನಲ್ಲೇ ಯುದ್ಧ ಕೊನೆಗೊಳಿಸಲು Vladimir Putin ಮುಂದು; ಉಕ್ರೇನ್ ಜೊತೆ ರಷ್ಯಾ ಪ್ರಸ್ತಾಪ!

ಘೋಷಿತ ಕದನ ವಿರಾಮದ ಮೂರು ದಿನಗಳಲ್ಲಿ, ಉಕ್ರೇನ್ ರಷ್ಯಾದ ಗಡಿಯ ಮೇಲೆ ದಾಳಿ ಮಾಡಲು 5 ಪ್ರಯತ್ನಗಳನ್ನು ಮಾಡಿದೆ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.
Vladimir Putin-zelensky
ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಉಕ್ರೇನ್ ಪ್ರಧಾನಿ ಝೆಲೆನ್ಸ್ಕಿ
Updated on

ಮಾಸ್ಕೋ: ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾ ನಡುವೆ ಉಲ್ಬಣಗೊಂಡಿದ್ದ ಸೇನಾ ಸಂಘರ್ಷಕ್ಕೆ ನಿನ್ನೆ ಬ್ರೇಕ್ ಬಿದ್ದಿದ್ದು, ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಇದೀಗ ರಷ್ಯಾ-ಉಕ್ರೇನ್ ನಡುವಿನ ಯುದ್ಧ ಕೊನೆಗಾಣಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾನುವಾರ ಮೇ 15 ರಂದು ಇಸ್ತಾನ್‌ಬುಲ್‌ನಲ್ಲಿ ಉಕ್ರೇನ್‌ನೊಂದಿಗೆ ನೇರ ಮಾತುಕತೆಗಳ ಕುರಿತು ಪ್ರಸ್ತಾಪಿಸಿದರು ಎನ್ನಲಾಗಿದೆ.

ಈ ಬಗ್ಗೆ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದ್ದು, "2022 ರಲ್ಲಿ ಕದವ ವಿರಾಮ ಮಾತುಕತೆಗಳನ್ನು ಮುರಿದದ್ದು ರಷ್ಯಾ ಅಲ್ಲ. ಅದು ಉಕ್ರೇನ್. ಆದಾಗ್ಯೂ, ಯಾವುದೇ ಪೂರ್ವಭಾವಿ ಷರತ್ತುಗಳಿಲ್ಲದೆ ಉಕ್ರೇನ್ ಜೊತೆ ನೇರ ಮಾತುಕತೆಗಳನ್ನು ಪುನರಾರಂಭಿಸಬೇಕೆಂದು ನಾವು ಪ್ರಸ್ತಾಪಿಸುತ್ತಿದ್ದೇವೆ ಎಂದು ಪುಟಿನ್ ಹೇಳಿದ್ದಾರೆ ಎಂದು ವರದಿ ಮಾಡಿದೆ.

Vladimir Putin-zelensky
'ನಿಮ್ಮ ಜೊತೆ ದೃಢವಾಗಿ ನಿಲ್ಲುತ್ತೇವೆ': ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನಕ್ಕೆ ಚೀನಾ ಬೆಂಬಲ; ಭಾರತ ಕೆಂಗಣ್ಣು

"ಎಲ್ಲದರ ಹೊರತಾಗಿಯೂ, ಗುರುವಾರ ಇಸ್ತಾನ್‌ಬುಲ್‌ನಲ್ಲಿ ಈಗಾಗಲೇ ಮಾತುಕತೆಗಳನ್ನು ಪುನರಾರಂಭಿಸಲು ನಾವು ಉಕ್ರೇನ್ ಅಧಿಕಾರಿಗಳಿಗೆ ಅವಕಾಶ ನೀಡುತ್ತೇವೆ. ಈ ಮಾತುಕತೆಗಳ ಪರಿಣಾಮವಾಗಿ, ಜಂಟಿ ಕರಡು ದಾಖಲೆಯನ್ನು ಸಿದ್ಧಪಡಿಸಲಾಯಿತು ಮತ್ತು ಅದನ್ನು ಉಕ್ರೇನ್ ಸಮಾಲೋಚನಾ ಗುಂಪಿನ ಮುಖ್ಯಸ್ಥರು ಪ್ರಾರಂಭಿಸಿದರು, ಆದರೆ ಪಶ್ಚಿಮದ ಒತ್ತಾಯದ ಮೇರೆಗೆ ಅದನ್ನು ಕಸದ ಬುಟ್ಟಿಗೆ ಎಸೆಯಲಾಯಿತು ಎಂದು ನಾನು ನಿಮಗೆ ನೆನಪಿಸುತ್ತೇನೆ ಎಂದು ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

"ರಷ್ಯಾ ಪದೇ ಪದೇ ಕದನ ವಿರಾಮ ಉಪಕ್ರಮಗಳನ್ನು ಮಾಡಿದೆ. ಆದರೆ ಉಕ್ರೇನ್ ಅಧಿಕಾರಿಗಳು ನಮ್ಮ ಯಾವುದೇ ಕದನ ವಿರಾಮ ಪ್ರಸ್ತಾಪಗಳಿಗೆ ಪ್ರತಿಕ್ರಿಯಿಸಿಲ್ಲ. ಘೋಷಿತ ಕದನ ವಿರಾಮದ ಮೂರು ದಿನಗಳಲ್ಲಿ, ಉಕ್ರೇನ್ ರಷ್ಯಾದ ಗಡಿಯ ಮೇಲೆ ದಾಳಿ ಮಾಡಲು 5 ಪ್ರಯತ್ನಗಳನ್ನು ಮಾಡಿದೆ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com