ಕಾಪಿ ಕಾಪಿ ಕಾಪಿ... ಪಾಕ್ ನ Copycat ಬಹಿರಂಗ: ಭಾರತದ ಪ್ರತಿಯೊಂದು ಹೆಜ್ಜೆಯನ್ನೂ ಒಂದೊಂದಾಗಿ ಕಾಪಿ ಮಾಡುತ್ತಿರುವ ಪಾಕಿಸ್ತಾನ!

ಭಾರತದ ನಡೆಯನ್ನು ಕಾಪಿ ಮಾಡಿರುವ ಪಾಕಿಸ್ತಾನ ಇದೀಗ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ನೇತೃತ್ವದ ನಿಯೋಗವೊಂದನ್ನು ರಚಿಸಿದೆ.
ಕಾಪಿ ಕಾಪಿ ಕಾಪಿ... ಪಾಕ್ ನ Copycat ಬಹಿರಂಗ: ಭಾರತದ ಪ್ರತಿಯೊಂದು ಹೆಜ್ಜೆಯನ್ನೂ ಒಂದೊಂದಾಗಿ ಕಾಪಿ ಮಾಡುತ್ತಿರುವ ಪಾಕಿಸ್ತಾನ!
Updated on

ಭಾರತದ ಆಪರೇಷನ್ ಸಿಂಧೂರ್ ನಂತರ, ಪಾಕಿಸ್ತಾನವು ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಮಾನಕ್ಕೊಳಗಾಗಿದ್ದು ಇಡೀ ಜಗತ್ತು ಈ ಭಯೋತ್ಪಾದಕ ರಾಷ್ಟ್ರದ ನಿಜವಾದ ಮುಖವನ್ನು ನೋಡಿದೆ. ಈಗ ಭಾರತ ಸರ್ಕಾರವು ಸಂಸದರ ನೇತೃತ್ವದಲ್ಲಿ ಏಳು ತಂಡಗಳನ್ನು ರಚಿಸಿದ್ದು ಅವರು 33 ದೇಶಗಳಿಗೆ ಭೇಟಿ ನೀಡಿ ಪಾಕಿಸ್ತಾನವನ್ನು ಬಯಲು ಮಾಡಲಿದ್ದಾರೆ. ಈ ಗುಂಪಿನಲ್ಲಿ ವಿವಿಧ ಪಕ್ಷಗಳ ಸಂಸದರಲ್ಲದೆ, ಸಚಿವರು ಮತ್ತು ಮಾಜಿ ರಾಯಭಾರಿಗಳನ್ನು ಸಹ ಸೇರಿಸಲಾಗಿದೆ. ಆದರೆ ಈ ಹೆಜ್ಜೆಯಲ್ಲೂ ಪಾಕಿಸ್ತಾನ ಭಾರತವನ್ನು ನಕಲು ಮಾಡುವುದನ್ನು ನಿಲ್ಲಿಸಲಿಲ್ಲ. ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರಿಗೆ ಉನ್ನತ ಮಟ್ಟದ ನಿಯೋಗವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿದೆ. ಅದು ವಿದೇಶಗಳಿಗೆ ಹೋಗಿ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನದ ಪರವಾಗಿ ಮಂಡಿಸಲಿದೆ.

ಪಾಕಿಸ್ತಾನದ ಮುಖವನ್ನು ಬಯಲು ಮಾಡಲು ಭಾರತ ಸರ್ಕಾರ ಸರ್ವಪಕ್ಷ ನಿಯೋಗವನ್ನು ವಿದೇಶ ಪ್ರವಾಸಕ್ಕೆ ಕಳುಹಿಸಲು ನಿರ್ಧರಿಸಿದ ತಕ್ಷಣ, ನೆರೆಯ ದೇಶಕ್ಕೆ ತನ್ನ ರಹಸ್ಯಗಳು ಬಹಿರಂಗಗೊಳ್ಳುವ ಭೀತಿ ಶುರುವಾಗಿದೆ. ಇದರ ನಂತರ, ಶನಿವಾರ ತಮ್ಮ ಪ್ರಚಾರವನ್ನು ಹರಡಲು, ಪ್ರಧಾನಿ ಶಹಬಾಜ್ ಷರೀಫ್ ಅವರು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಮತ್ತು ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರನ್ನು ಆಯ್ಕೆ ಮಾಡಿದ್ದಾರೆ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನದ ಪರವಾದ ಅಭಿಪ್ರಾಯವನ್ನು ಮಂಡಿಸಲು ವಿವಿಧ ದೇಶಗಳಿಗೆ ಭೇಟಿ ನೀಡಲು ಉನ್ನತ ಮಟ್ಟದ ನಿಯೋಗವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಷರೀಫ್ ಬಿಲಾವಲ್ ಅವರಿಗೆ ವಹಿಸಿದ್ದಾರೆ.

ಪಾಕಿಸ್ತಾನವು ಬಿಲಾವಲ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದು, ಇದರಲ್ಲಿ ಮಾಜಿ ಸಚಿವ ಖುರ್ರಂ ದಸ್ತಗೀರ್ ಖಾನ್, ಹಿನಾ ರಬ್ಬಾನಿ ಖಾರ್ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿ ಜಲೀಲ್ ಅಬ್ಬಾಸ್ ಜಿಲಾನಿ ಇದ್ದಾರೆ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಶಾಂತಿಗಾಗಿ ಪಾಕಿಸ್ತಾನದ ವಾದವನ್ನು ಮಂಡಿಸಲು ನಿಯೋಗದ ನೇತೃತ್ವ ವಹಿಸುವಂತೆ ಪ್ರಧಾನಿ ಶಹಬಾಜ್ ಷರೀಫ್ ನನ್ನನ್ನು ವಿನಂತಿಸಿದರು ಎಂದು ಬಿಲಾವಲ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಈ ಜವಾಬ್ದಾರಿಯನ್ನು ಅತ್ಯಂತ ಗೌರವಯೂತವಾಗಿ ಸ್ವೀಕರಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಕಾಪಿ ಕಾಪಿ ಕಾಪಿ... ಪಾಕ್ ನ Copycat ಬಹಿರಂಗ: ಭಾರತದ ಪ್ರತಿಯೊಂದು ಹೆಜ್ಜೆಯನ್ನೂ ಒಂದೊಂದಾಗಿ ಕಾಪಿ ಮಾಡುತ್ತಿರುವ ಪಾಕಿಸ್ತಾನ!
ಪಾಕ್ 'ಉಗ್ರ ಮುಖ' ಬಯಲಿಗೆ ಭಾರತ ಪಣ: ಭಯೋತ್ಪಾದಕ ರಾಷ್ಟ್ರದ ಮೇಲೆ ಒತ್ತಡ ಹೆಚ್ಚಿಸಲು 51 ಸಂಸದರು ವಿದೇಶಕ್ಕೆ; ತರೂರ್ ಅಮೆರಿಕಕ್ಕೆ, ಕನಿಮೋಳಿ ರಷ್ಯಾಕ್ಕೆ, ಉಳಿದ ತಂಡ ಎಲ್ಲೆಲ್ಲಿಗೆ?

ಭಾರತದ ನಡೆಯನ್ನು ಪಾಕಿಸ್ತಾನ ನಕಲು ಮಾಡುತ್ತಿರುವುದು ಇದೇ ಮೊದಲಲ್ಲ. ಪಹಲ್ಗಾಮ್ ದಾಳಿಯ ನಂತರ ಭಾರತ ತೆಗೆದುಕೊಂಡ ಪ್ರತಿಯೊಂದು ನಿರ್ಧಾರವನ್ನು ಪಾಕಿಸ್ತಾನ ಈ ರೀತಿ ನಕಲು ಮಾಡುತ್ತಿದೆ. ಇದಕ್ಕೂ ಮೊದಲು, ಆಪರೇಷನ್ ಸಿಂಧೂರ್ ಯಶಸ್ಸಿನ ನಂತರ, ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಬಲವಾದ ಸಂದೇಶ ನೀಡಲು ಮತ್ತು ವಾಯು ಯೋಧರನ್ನು ಪ್ರೋತ್ಸಾಹಿಸಲು ಅದಂಪುರ ವಾಯುನೆಲೆಗೆ ಭೇಟಿ ನೀಡಿದ್ದರು. ಇದನ್ನೇ ಅನುಕರಿಸಿ, ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಕೂಡ ತಮ್ಮ ಮಿಲಿಟರಿ ಭೇಟಿಗಳನ್ನು ಪ್ರಾರಂಭಿಸಿದರು. ಆದರೆ ಇದಕ್ಕಾಗಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಎದುರಿಸಬೇಕಾಯಿತು. ಅಲ್ಲದೆ ಅವರ ಭೇಟಿ ಕೆಲಸ ಪ್ರಯೋಜನವಾಗಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com