'ಭಾರತ ವಿರೋಧಿ ಚಟುವಟಿಕೆ': ಕಾಶ್ಮೀರಿ ಮೂಲದ ಬ್ರಿಟಿಷ್ ಶಿಕ್ಷಣ ತಜ್ಞೆಯ ವಿದೇಶಿ ಪೌರತ್ವ ರದ್ದು

ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದ ಕೌಲ್ ಅವರಿಗೆ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಭಾರತದಲ್ಲಿ ಪ್ರವೇಶವನ್ನು ನಿರಾಕರಿಸಲಾಗಿತ್ತು ಮತ್ತು ವಿಮಾನ ನಿಲ್ದಾಣದಿಂದಲೇ ಅವರನ್ನು ಗಡಿಪಾರು ಮಾಡಲಾಗಿತ್ತು.
ನಿತಾಶಾ ಕೌಲ್
ನಿತಾಶಾ ಕೌಲ್
Updated on

ಲಂಡನ್: ಲಂಡನ್‌ನ ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯದ ರಾಜಕೀಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಪ್ರಾಧ್ಯಾಪಕಿಯೊಬ್ಬರು, "ಭಾರತ ವಿರೋಧಿ ಚಟುವಟಿಕೆ" ನಡೆಸಿದ ಆರೋಪದ ಮೇಲೆ ತಮ್ಮ ಸಾಗರೋತ್ತರ ಪೌರತ್ವ(OCI)ವನ್ನು ಭಾರತೀಯ ಅಧಿಕಾರಿಗಳು ರದ್ದುಗೊಳಿಸಿದ್ದಾರೆ ಎಂದು ಹೇಳಿದ್ದಾರೆ.

ಭಾರತ ಮೂಲದ ಬ್ರಿಟಿಷ್ ಶಿಕ್ಷಣ ತಜ್ಞೆ ನಿತಾಶಾ ಕೌಲ್ ಅವರು ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಕೇಂದ್ರ ಸರ್ಕಾರದಿಂದ ಸ್ವೀಕರಿಸಿದ ಸಂವಹನದ ವಿವರಗಳನ್ನು ಪೋಸ್ಟ್ ಮಾಡಿದ್ದು, ಇದು "ದುರುದ್ದೇಶ ಮತ್ತು ಸತ್ಯಗಳು ಅಥವಾ ಇತಿಹಾಸದ ಸಂಪೂರ್ಣ ನಿರ್ಲಕ್ಷ್ಯ" ದಿಂದ ಪ್ರೇರೇಪಿತವಾಗಿದೆ ಎಂದು ಆರೋಪಿಸಿದ್ದಾರೆ.

ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದ ಕೌಲ್ ಅವರಿಗೆ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಭಾರತದಲ್ಲಿ ಪ್ರವೇಶವನ್ನು ನಿರಾಕರಿಸಲಾಗಿತ್ತು ಮತ್ತು ವಿಮಾನ ನಿಲ್ದಾಣದಿಂದಲೇ ಅವರನ್ನು ಗಡಿಪಾರು ಮಾಡಲಾಗಿತ್ತು.

"ದ್ವೇಷದ ವಿರುದ್ಧ ಮಾತನಾಡುವ ಶಿಕ್ಷಣತಜ್ಞರನ್ನು ಬಂಧಿಸುವುದಕ್ಕೂ, ಭಾರತದ ಹೊರಗಿನ ಶಿಕ್ಷಣತಜ್ಞರಿಗೆ ದೇಶ ಮತ್ತು ಕುಟುಂಬಕ್ಕೆ ಪ್ರವೇಶ ನಿರಾಕರಿಸುವುದಕ್ಕೂ ನಿಕಟ ಸಂಬಂಧ ಇದೆ ಎನ್ನುವುದು ಗೊತ್ತಿರಲಿ" ಎಂದು ಕೌಲ್ X ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ನಿತಾಶಾ ಕೌಲ್
ಬ್ರಿಟನ್ ಲೇಖಕಿ ನಿತಾಶಾ ಕೌಲ್‌ ಬೆಂಗಳೂರು ಪ್ರವೇಶಕ್ಕೆ ಅನುಮತಿ ನಕಾರ: ರಾಜಕೀಯ ವಲಯದಲ್ಲಿ ಆರೋಪ-ಪ್ರತ್ಯಾರೋಪ!

"ಐಡಿಯಾ ಸಂಕೇತವನ್ನು ಕಳುಹಿಸುವುದು - ಒಳಗೆ ನಮ್ಮನ್ನು ಸವಾಲು ಮಾಡಬೇಡಿ ಮತ್ತು ಹೊರಗಿನ ಪ್ರೇಕ್ಷಕರಿಗೆ ಏನು ತಿಳಿಸಲು ನಡೆಯುತ್ತಿದೆ ಎಂಬುದನ್ನು ವಿಶ್ಲೇಷಿಸಲು ಧೈರ್ಯ ಮಾಡಬೇಡಿ" ಎಂದು ಅವರು ಹೇಳಿದರು.

"ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಲವಾರು ಪ್ರತಿಕೂಲ ಬರಹಗಳು, ಭಾಷಣಗಳು ಮತ್ತು ಪತ್ರಿಕೋದ್ಯಮ ಚಟುವಟಿಕೆಗಳ" ಮೂಲಕ ನೀವು ನಿಯಮಿತವಾಗಿ "ಭಾರತದ ಸಾರ್ವಭೌಮತ್ವದ ವಿಷಯಗಳಲ್ಲಿ ಭಾರತ ಮತ್ತು ಅದರ ಸಂಸ್ಥೆಗಳನ್ನು ಗುರಿಯಾಗಿರಿಸಿಕೊಳ್ಳುತ್ತೀದಿರಿ" ಎಂದು ಕೇಂದ್ರ ಸರ್ಕಾರ ಕೌಲ್ ಗೆ ಕಳುಹಿಸಿದ ಸಂವಹನದಲ್ಲಿ ಆರೋಪಿಸಲಾಗಿದೆ.

ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯದ ಪ್ರಜಾಪ್ರಭುತ್ವ ಅಧ್ಯಯನ ಕೇಂದ್ರದ ನಿರ್ದೇಶಕಿಯಾಗಿರುವ ಕೌಲ್ ಅವರು, ತಮ್ಮ OCI ರದ್ದತಿಗೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, "ದುಷ್ಟ ನಂಬಿಕೆ, ಇದು ಅಂತರರಾಷ್ಟ್ರೀಯ ದಮನದ ಪ್ರತೀಕಾರದ ಕ್ರೂರ ಉದಾಹರಣೆ" ಎಂದು ಖಂಡಿಸಿದ್ದಾರೆ ಮತ್ತು "ಅಲ್ಪಸಂಖ್ಯಾತ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ನೀತಿಗಳ ಕುರಿತು ಪಾಂಡಿತ್ಯಪೂರ್ಣ ಕೆಲಸ" ಮಾಡಿದ್ದಕ್ಕಾಗಿ ತಮಗೆ ಈ ಶಿಕ್ಷೆ ವಿಧಿಸಲಾಗಿದೆ ಎಂದು ಕೌಲ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com