ಅಲ್ಲಾಹನ ಆಶೀರ್ವಾದವಾಗಿದೆ: ಪ್ರವಾಹದ ನೀರನ್ನು ಟಬ್‌ಗಳಲ್ಲಿ ತುಂಬಿಸಿಕೊಳ್ಳಿ; ಪಾಕಿಗಳಿಗೆ ರಕ್ಷಣಾ ಸಚಿವ ಖವಾಜಾ ಸಲಹೆ!

ಪಾಕಿಸ್ತಾನದ ಪಂಜಾಬ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಮತ್ತು ಖೈಬರ್ ಪಖ್ತುಂಖ್ವಾ (KPK) ಪ್ರಾಂತ್ಯಗಳಲ್ಲಿ ನಿರಂತರ ಮಳೆಯಿಂದಾಗಿ ಜನರು ತೊಂದರೆಗೀಡಾಗಿದ್ದಾರೆ. ಈ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ.
Pakistan Floods
ಸಂಗ್ರಹ ಚಿತ್ರ
Updated on

ಪಾಕಿಸ್ತಾನದ ಪಂಜಾಬ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಮತ್ತು ಖೈಬರ್ ಪಖ್ತುಂಖ್ವಾ (KPK) ಪ್ರಾಂತ್ಯಗಳಲ್ಲಿ ನಿರಂತರ ಮಳೆಯಿಂದಾಗಿ ಜನರು ತೊಂದರೆಗೀಡಾಗಿದ್ದಾರೆ. ಈ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ. ಅಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ತಮ್ಮ ಜನರಿಗೆ ಪ್ರವಾಹದ ನೀರನ್ನು ಸಂಗ್ರಹಿಸಿ ಅದನ್ನು ಟಬ್‌ಗಳಲ್ಲಿ ತುಂಬಿಸಿಕೊಳ್ಳಿ, ಅಲ್ಲಾಹನ ಆಶೀರ್ವಾದ ಎಂದು ತಿಳಿಯಿರಿ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಸುದ್ದಿ ಚಾನೆಲ್ ದುನ್ಯಾ ನ್ಯೂಸ್‌ನೊಂದಿಗೆ ಮಾತನಾಡಿದ ಖವಾಜಾ ಆಸಿಫ್, ಜನರು ಈ ನೀರನ್ನು ಸುರಿಯುವ ಬದಲು ಪಾತ್ರೆಗಳು ಅಥವಾ ಟಬ್‌ಗಳಲ್ಲಿ ತುಂಬಿಸಿಕೊಳ್ಳಬೇಕು ಎಂದು ಹೇಳಿದರು. ತಗ್ಗು ಪ್ರದೇಶಗಳಲ್ಲಿ ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಾಸಿಸುವ ಸುಮಾರು 25 ಲಕ್ಷ ಜನರು ಪ್ರವಾಹದಿಂದ ತೊಂದರೆಗೀಡಾಗಿದ್ದಾರೆ. ಈ ಬಾರಿ ಮಾನ್ಸೂನ್ ಮಳೆಯು ಎಲ್ಲಾ ದಾಖಲೆಗಳನ್ನು ಮುರಿದಿದೆ. ಪಾಕಿಸ್ತಾನದ ಕೆಪಿಕೆ, ಪಿಒಕೆ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ತುಂಬಾ ಮಳೆಯಾಗುತ್ತಿದ್ದು ಈ ಪ್ರದೇಶಗಳು ಸಂಪೂರ್ಣವಾಗಿ ಮುಳುಗಿವೆ.

ಪಾಕಿಸ್ತಾನದ ಪರಿಸ್ಥಿತಿಯ ಕುರಿತು ಖವಾಜಾ ಆಸಿಫ್, ಪ್ರವಾಹದ ವಿರುದ್ಧ ಪ್ರತಿಭಟಿಸುತ್ತಿರುವವರು, ರಸ್ತೆಗಳಿಗೆ ಅಡ್ಡಲಾಗಿ ಕುಳಿತವರು, ಈ ನೀರನ್ನು ಸಂಗ್ರಹಿಸಬೇಕು. ಅದನ್ನು ಒಂದು ತೊಟ್ಟಿಯಲ್ಲಿ ಸಂಗ್ರಹಿಸಬೇಕು. ನಾವು ಅದನ್ನು ಸಂಗ್ರಹಿಸಿ ಅದಕ್ಕೆ ಆಶೀರ್ವಾದದ ಆಕಾರ ನೀಡಬೇಕು. ಅದಕ್ಕಾಗಿ ಅಣೆಕಟ್ಟುಗಳನ್ನು ಸಹ ನಿರ್ಮಿಸಬೇಕು ಎಂದು ಹೇಳಿದರು. 10-15 ವರ್ಷಗಳ ಯೋಜನೆಗಳ ಬದಲಿಗೆ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸಬೇಕು ಎಂದು ಖವಾಜಾ ಆಸಿಫ್ ಹೇಳಿದರು.

ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಪ್ರಕಾರ, ಜೂನ್‌ನಿಂದ ಪಾಕಿಸ್ತಾನದಲ್ಲಿ ಮುಂಗಾರು ಮಳೆಯಾಗುತ್ತಿದ್ದು, ಆಗಸ್ಟ್ 31ರವರೆಗೆ 854 ಜನರು ಪ್ರಾಣ ಕಳೆದುಕೊಂಡಿದ್ದು 1,100 ಜನರು ಗಾಯಗೊಂಡಿದ್ದಾರೆ. ಚೆನಾಬ್ ನದಿಯ ನೀರಿನ ಮಟ್ಟ ಹೆಚ್ಚುತ್ತಿದ್ದು, ಅದು ಮುಲ್ತಾನ್ ತಲುಪಬಹುದು ಎಂದು ಎನ್‌ಡಿಎಂಎ ಎಚ್ಚರಿಸಿತ್ತು. ಅದೇ ಸಮಯದಲ್ಲಿ, ಪಂಜಾಬ್‌ನ ನದಿಯ ನೀರಿನ ಮಟ್ಟವು ಸೆಪ್ಟೆಂಬರ್ 5 ರ ವೇಳೆಗೆ ಗರಿಷ್ಠ ಮಟ್ಟವನ್ನು ತಲುಪುತ್ತದೆ. ಆದರೆ ಸಟ್ಲೆಜ್ ನದಿಯ ನೀರು ಸುಲೇಮಂಕಿ ಮತ್ತು ಹೆಡ್ ಇಸ್ಲಾಂ ಸೇರಿದಂತೆ ಬ್ಯಾರೇಜ್‌ಗಳ ಕಡೆಗೆ ಚಲಿಸುತ್ತಿದೆ.

Pakistan Floods
Sudan: ವಿನಾಶಕಾರಿ ಭೂಕುಸಿತದಲ್ಲಿ 1,000 ಕ್ಕೂ ಹೆಚ್ಚು ಮಂದಿ ಸಾವು- ಸೇನೆ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪರಿಹಾರ ಆಯುಕ್ತ ನಬೀಲ್ ಜಾವೇದ್ ಅವರು ಪ್ರವಾಹದಿಂದಾಗಿ 9,99,000 ಜನರನ್ನು ಸ್ಥಳಾಂತರಿಸಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. 7 ಲಕ್ಷ 80 ಸಾವಿರ ಪ್ರಾಣಿಗಳನ್ನು ಸಹ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ ಎಂದು ಹೇಳಿದರು. 395 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. 392 ವೈದ್ಯಕೀಯ ಶಿಬಿರಗಳು ಮತ್ತು 336 ಪಶುವೈದ್ಯಕೀಯ ಶಿಬಿರಗಳು ಸಹ ಪ್ರಾಣಿಗಳಿಗೆ ಲಭ್ಯವಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com