Hindu ಸಮುದಾಯಕ್ಕೆ ಅವಮಾನ: ನೇಪಾಳದಲ್ಲಿ ಜನಾಂಗೀಯ ಸಂಘರ್ಷ, ಮಸೀದಿ ಧ್ವಂಸ; ಭಾರತದ ಗಡಿ ಬಂದ್, Video!

Gen Z ಪ್ರತಿಭಟನೆ ನಂತರ, ನೇಪಾಳದಲ್ಲಿ ಮತ್ತೆ ಪ್ರಕ್ಷುಬ್ಧ ನಿರ್ಮಾಣವಾಗಿದೆ. ಭಾರತದ ಗಡಿಯಲ್ಲಿರುವ ಪರ್ಸಾ ಮತ್ತು ಧನುಸಾ ಧಾಮ್ ಜಿಲ್ಲೆಗಳಲ್ಲಿ ಉದ್ವಿಗ್ನತೆ ಭುಗಿಲೆದ್ದಿದೆ.
ನೇಪಾಳದಲ್ಲಿ ಪ್ರತಿಭಟನೆ
ನೇಪಾಳದಲ್ಲಿ ಪ್ರತಿಭಟನೆ
Updated on

Gen Z ಪ್ರತಿಭಟನೆ ನಂತರ, ನೇಪಾಳದಲ್ಲಿ ಮತ್ತೆ ಪ್ರಕ್ಷುಬ್ಧ ನಿರ್ಮಾಣವಾಗಿದೆ. ಭಾರತದ ಗಡಿಯಲ್ಲಿರುವ ಪರ್ಸಾ ಮತ್ತು ಧನುಸಾ ಧಾಮ್ ಜಿಲ್ಲೆಗಳಲ್ಲಿ ಉದ್ವಿಗ್ನತೆ ಭುಗಿಲೆದ್ದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ 'ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ' ವೀಡಿಯೊವೊಂದು ವೇಗವಾಗಿ ಹರಡುತ್ತಿದೆ. ಅನೇಕ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದು ಪ್ರತಿಭಟನೆ ಹಿಂಸಾತ್ಮಕ ರೂಪಪಡೆದುಕೊಂಡಿದೆ. ಉದ್ರಿಕ್ತ ಗುಂಪೊಂದು ಸ್ಥಳೀಯ ಮಸೀದಿಯನ್ನು ಧ್ವಂಸಗೊಳಿಸಿದ್ದು ಪರಿಸ್ಥಿತಿಯಿಂದಾಗಿ ಭಾರತ ಬಿಹಾರದ ಭಾರತ-ನೇಪಾಳ ಗಡಿಯನ್ನು ಸಂಪೂರ್ಣವಾಗಿ ಮುಚ್ಚಿದೆ.

ಭಾರತೀಯ ಸಶಸ್ತ್ರ ಗಡಿ ಪಡೆ (ಎಸ್‌ಎಸ್‌ಬಿ) ಬಿಹಾರದ ರಕ್ಸೌಲ್ ಬಳಿಯ ಭಾರತ-ನೇಪಾಳ ಗಡಿಯನ್ನು ಮುಚ್ಚಿದೆ. ವೀಡಿಯೊ ವೈರಲ್ ಆದ ಕೂಡಲೇ, ಧನುಸಾ ಮತ್ತು ಪರ್ಸಾ ಜಿಲ್ಲೆಗಳಲ್ಲಿ ಉದ್ವಿಗ್ನತೆ ಹರಡಿತು. ಸ್ಥಳೀಯ ಜನಸಮೂಹ ಇಬ್ಬರು ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿತು. ಆದರೆ ಪರಿಸ್ಥಿತಿ ಶಾಂತವಾಗಲಿಲ್ಲ.

ಸಕುವಾ ಮಾರನ್ ಪ್ರದೇಶದಲ್ಲಿ ಮಸೀದಿಯ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದ ಬೆನ್ನಲ್ಲೇ ಉದ್ವಿಗ್ನತೆ ತಾರಕಕ್ಕೇರಿದೆ. ಪ್ರತಿಭಟನೆಕಾರರು ಪೊಲೀಸರ ಮೇಲೆ ದಾಳಿ ನಡೆಸಿದರು. ಬಿರ್ಗಂಜ್ ಪ್ರದೇಶದಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು ಅಲ್ಲದೆ ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿದರು.

ನೇಪಾಳದಲ್ಲಿ ಪ್ರತಿಭಟನೆ
ಬಾಂಗ್ಲಾದೇಶದಲ್ಲಿ 'ಭಾರತೀಯರ ಬ್ಯಾನ್'ಗೆ ಹೆಚ್ಚಿದ ಒತ್ತಡ; ಪ್ರತಿಭಟನೆ

ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹಲವಾರು ಸುತ್ತು ಅಶ್ರುವಾಯು ಅಥವಾ ಅಶ್ರುವಾಯು ಸಿಡಿಸಿದರು. ಪ್ರಸ್ತುತ ಪರ್ಸಾ ಜಿಲ್ಲಾಡಳಿತವು ಬಿರ್ಗಂಜ್ ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಿದೆ. ಈ ಪರಿಸ್ಥಿತಿಯಲ್ಲಿ, ಎಸ್‌ಎಸ್‌ಬಿ ನೇಪಾಳ-ಭಾರತ ಗಡಿಯನ್ನು ನಿಯಂತ್ರಿಸುತ್ತಿದೆ. ತುರ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ. ಗಡಿ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com