ಇರಾನ್ ವಿದೇಶಾಂಗ ಸಚಿವ- ಎಸ್ ಜೈಶಂಕರ್ ಮಾತುಕತೆ: ಪ್ರಾದೇಶಿಕ ಸಮರದ ಬಗ್ಗೆ ಆತಂಕ, ಹಡಗುಗಳ ಮೇಲೆ ದಾಳಿ ನಡೆಸದಂತೆ ಒತ್ತಾಯ

"ವಾಣಿಜ್ಯ ಹಡಗು ಮತ್ತು ನಾವಿಕರ ಮೇಲಿನ ದಾಳಿಯನ್ನು ಯಾವುದೇ ಸಂದರ್ಭದಲ್ಲೂ ತಪ್ಪಿಸಬೇಕೆಂದು ಬಲವಾಗಿ ಒತ್ತಾಯಿಸಲಾಗಿದೆ. ಯಾವುದೇ ಪಕ್ಷದಿಂದ ಅಂತಹ ಯಾವುದೇ ದಾಳಿಯನ್ನು ಭಾರತ ಖಂಡಿಸುತ್ತದೆ" ಎಂದು ಅವರು ಹೇಳಿದರು.
External Affairs Minister S Jaishankar with his Iranian counterpart, Abbas Araghchi.
ಇರಾನ್ ವಿದೇಶಾಂಗ ಸಚಿವ ಅರಾಘ್ಚಿ-ವಿದೇಶಾಂಗ ಸಚಿವ ಜೈಶಂಕರ್ online desk
Updated on

ನವದೆಹಲಿ: ವಿದೇಶಾಂಗ ಸಚಿವ ಎಸ್. ಜೈಶಂಕರ್ ಶುಕ್ರವಾರ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಭಾರತದ "ಆತಂಕವನ್ನು"ವನ್ನು ಮಾತುಕತೆ ವೇಳೆ ಜೈಶಂಕರ್ ವ್ಯಕ್ತಪಡಿಸಿದ್ದಾರೆ. ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ವಾಣಿಜ್ಯ ಹಡಗು ಮತ್ತು ನಾವಿಕರನ್ನು ಯಾವುದೇ ಸಂದರ್ಭದಲ್ಲೂ ಗುರಿಯಾಗಿಸಬಾರದು ಎಂದು ಜೈಶಂಕರ್ ಬಲವಾಗಿ ಒತ್ತಾಯಿಸಿದ್ದಾರೆ ಮತ್ತು ಯಾವುದೇ ಪಕ್ಷದಿಂದ ಅಂತಹ ಯಾವುದೇ ದಾಳಿಯನ್ನು ಭಾರತ ಖಂಡಿಸುತ್ತದೆ ಎಂದು ಹೇಳಿದರು.

"ಇಂದು ಸಂಜೆ ಇರಾನ್‌ನ ವಿದೇಶಾಂಗ ಸಚಿವ @araghchi ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಲಾಗಿದೆ. ಈ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ನಮ್ಮ ಆಳವಾದ ಕಳವಳಗಳನ್ನು ತಿಳಿಸಲಾಗಿದೆ" ಎಂದು ಜೈಶಂಕರ್ ಹೇಳಿದರು.

"ವಾಣಿಜ್ಯ ಹಡಗು ಮತ್ತು ನಾವಿಕರ ಮೇಲಿನ ದಾಳಿಯನ್ನು ಯಾವುದೇ ಸಂದರ್ಭದಲ್ಲೂ ತಪ್ಪಿಸಬೇಕೆಂದು ಬಲವಾಗಿ ಒತ್ತಾಯಿಸಲಾಗಿದೆ. ಯಾವುದೇ ಪಕ್ಷದಿಂದ ಅಂತಹ ಯಾವುದೇ ದಾಳಿಯನ್ನು ಭಾರತ ಖಂಡಿಸುತ್ತದೆ" ಎಂದು ಅವರು ಹೇಳಿದರು.

ಪ್ರಸ್ತುತ ಬೆಳವಣಿಗೆಗಳು ಮತ್ತು ನಡೆಯುತ್ತಿರುವ ಚರ್ಚೆಗಳ ಕುರಿತು ಇರಾನ್‌ನ ದೃಷ್ಟಿಕೋನದ ಬಗ್ಗೆ ಮಾತುಕತೆ ವೇಳೆ ತಮಗೆ ವಿವರಿಸಲಾಯಿತು ಎಂದು ಜೈಶಂಕರ್ ಹೇಳಿದರು. ಪರಿಸ್ಥಿತಿಯನ್ನು ಪರಿಹರಿಸುವಲ್ಲಿ ಭಾರತ ನಿರಂತರವಾಗಿ ಸಂವಾದ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸಿದೆ ಎಂದು ಜೈಶಂಕರ್ ಪುನರುಚ್ಚರಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದಾಗಿನಿಂದ 10 ನಾವಿಕರು ಸೇರಿದಂತೆ 16 ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದ ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿದೆ.

External Affairs Minister S Jaishankar with his Iranian counterpart, Abbas Araghchi.
ಕಪ್ಪು ಸಮುದ್ರದಲ್ಲಿ ದಾಳಿ: ರಷ್ಯಾ ವಿದೇಶಾಂಗ ಸಚಿವ-ಜೈಶಂಕರ್ ಮಾತುಕತೆ; ಭಾರತೀಯ ನಾವಿಕರ ಸುರಕ್ಷತೆ ಪ್ರಸ್ತಾಪ

ಸಿಪಿಐ(ಎಂ) ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಈ ಅಂಕಿ-ಅಂಶಗಳನ್ನು ಬಹಿರಂಗಪಡಿಸಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಎಷ್ಟು ಭಾರತೀಯ ನಾವಿಕರು ಮತ್ತು ಇತರ ಭಾರತೀಯ ಪ್ರಜೆಗಳು ಸಾವನ್ನಪ್ಪಿದ್ದಾರೆ, ಗಾಯಗೊಂಡಿದ್ದಾರೆ, ಸಿಲುಕಿಕೊಂಡಿದ್ದಾರೆ ಅಥವಾ ಸ್ಥಳಾಂತರಿಸಲ್ಪಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಕೇಳಲಾಗಿತ್ತು.

"2026 ರಲ್ಲಿ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾದಾಗಿನಿಂದ, 10 ನಾವಿಕರು ಸೇರಿದಂತೆ 16 ಭಾರತೀಯ ಪ್ರಜೆಗಳು ಮಧ್ಯಪ್ರಾಚ್ಯದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ (ಸೌದಿ ಅರೇಬಿಯಾದಲ್ಲಿ ಒಬ್ಬರು; ಕುವೈತ್‌ನಲ್ಲಿ ಇಬ್ಬರು; ಒಮಾನ್‌ನಲ್ಲಿ ಎಂಟು; ಇರಾಕ್‌ನಲ್ಲಿ ಒಬ್ಬರು; ಮತ್ತು ಯುಎಇಯಲ್ಲಿ ನಾಲ್ಕು), ಮತ್ತು 75 ಭಾರತೀಯರು ಗಾಯಗೊಂಡಿದ್ದಾರೆ (ಯುಎಇಯಲ್ಲಿ 32; ಒಮಾನ್‌ನಲ್ಲಿ 24; ಕತಾರ್‌ನಲ್ಲಿ ನಾಲ್ಕು; ಕುವೈತ್‌ನಲ್ಲಿ 13; ಸೌದಿ ಅರೇಬಿಯಾದಲ್ಲಿ ಒಬ್ಬರು; ಮತ್ತು ಇಸ್ರೇಲ್‌ನಲ್ಲಿ ಒಬ್ಬರು)" ಎಂದು ಸಿಂಗ್ ಮಾಹಿತಿ ನೀಡಿದ್ದರು.

ಕತಾರ್‌ನ ರಾಸ್ ಲಫಾನ್ ಅನಿಲ ಸ್ಥಾವರದಲ್ಲಿ ನಡೆದ ಪ್ರತ್ಯೇಕ ಅಪಘಾತದಲ್ಲಿ 12 ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದರು.

ಸರ್ಕಾರಗಳೊಂದಿಗೆ ಸಮನ್ವಯದೊಂದಿಗೆ, ಮೃತ ಭಾರತೀಯ ಪ್ರಜೆಗಳ ಕುಟುಂಬಗಳಿಗೆ ಮೃತರ ಶವಗಳನ್ನು ಭಾರತಕ್ಕೆ ಬೇಗನೆ ತಲುಪಿಸಲು ಸಾಧ್ಯವಿರುವ ಎಲ್ಲ ಸಹಾಯವನ್ನು ಸರ್ಕಾರ ನೀಡಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com