West Asia conflict: ಇರಾನ್‌ ಪರಮೋಚ್ಛ ನಾಯಕನಾಗಿ ಮೊಜ್ತಬಾ ಖಮೇನಿ ನೇಮಕ

ಇರಾನ್ ದೇಶದ ಮಾಧ್ಯಮಗಳ ವರದಿಯ ಪ್ರಕಾರ, ಮೊಜ್ತಬಾ ಖಮೇನಿ ಅವರು ತಮ್ಮ ತಂದೆ ಅಯತೊಲ್ಲಾ ಅಲಿ ಖಮೇನಿ ಅವರ ನಂತರ ಸುಪ್ರೀಂ ಲೀಡರ್ ಆಗಿ ಅಧಿಕಾರ ವಹಿಸಲಿದ್ದಾರೆ.
Mojtaba Khamenei, new Iran's supreme leader.
ಮೊಜ್ತಬಾ ಖಮೇನಿPhoto |AFP
Updated on

ಅಮೆರಿಕಾ ಮತ್ತು ಇಸ್ರೇಲ್ ನೇತೃತ್ವದ ಆಪರೇಶನ್ ಎಪಿಕ್ ಫ್ಯೂರಿ ಹತ್ತನೇ ದಿನಕ್ಕೆ ಕಾಲಿಟ್ಟಿದ್ದು, ಇರಾನ್ ನ ನೂತನ ಪರಮೋಚ್ಛ ನಾಯಕನ ಹೆಸರನ್ನು ಸರ್ಕಾರ ಘೋಷಿಸಿದೆ.

ಇರಾನ್ ದೇಶದ ಮಾಧ್ಯಮಗಳ ವರದಿಯ ಪ್ರಕಾರ, ಮೊಜ್ತಬಾ ಖಮೇನಿ ಅವರು ತಮ್ಮ ತಂದೆ ಅಯತೊಲ್ಲಾ ಅಲಿ ಖಮೇನಿ ಅವರ ನಂತರ ಸುಪ್ರೀಂ ಲೀಡರ್ ಆಗಿ ಅಧಿಕಾರ ವಹಿಸಲಿದ್ದಾರೆ. ಅಲಿ ಖಮೇನಿ ಅವರು ಟೆಹ್ರಾನ್ ನಲ್ಲಿರುವ ತಮ್ಮ ನಿವಾಸದಲ್ಲಿ ಅಮೆರಿಕಾ ಮತ್ತು ಇಸ್ರೇಲ್ ನಡೆಸಿದ ಮೊದಲ ದಾಳಿ ವೇಳೆ ಹತ್ಯೆಗೀಡಾಗಿದ್ದರು.

ಇಸ್ರೇಲ್ ಈಗಾಗಲೇ ಇರಾನ್ ಗೆ ಎಚ್ಚರಿಕೆ ನೀಡಿದ್ದು, ಹೊಸ ಉತ್ತರಾಧಿಕಾರಿಯನ್ನು ನಾವು ಬಿಡುವುದಿಲ್ಲ, ದಾಳಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದೆ. ಇದೇ ವೇಳೆ, ಯುಎಇಯಲ್ಲಿ ಇರಾನ್ ನಡೆಸಿದ ದಾಳಿಗಳು ನಿನ್ನೆ ಸಹ ಅಬುಧಾಬಿಯನ್ನು ಗುರಿಯಾಗಿಸಿಕೊಂಡು ಮುಂದುವರಿದವು, ಆದರೆ ಕ್ಷಿಪಣಿಗಳನ್ನು ಮಧ್ಯದಲ್ಲೇ ತಡೆಹಿಡಿಯಲಾಯಿತು.

Mojtaba Khamenei, new Iran's supreme leader.
ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿ ಮನೆ ಮೇಲೆ 'ಬಾಂಬ್' ಎಸೆತ; 6 ಶಂಕಿತರ ಬಂಧನ

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಏಕೆ?

ಫೆಬ್ರವರಿ 28ರಿಂದ ಅಮೆರಿಕಾ ಮತ್ತು ಇಸ್ರೇಲ್ ಒಕ್ಕೂಟದ ನೇತೃತ್ವದಲ್ಲಿ ನಿರಂತರ ವಾಯುದಾಳಿಗಳು ನಡೆಯುತ್ತಿದ್ದು, ಇದರ ಮುಖ್ಯ ಉದ್ದೇಶ ಇರಾನ್‌ನ ಕ್ಷಿಪಣಿ ಸಾಮರ್ಥ್ಯ ಮತ್ತು ಪ್ರಮುಖ ನಾಯಕತ್ವ ಮೂಲಸೌಕರ್ಯಗಳನ್ನು ನಾಶಪಡಿಸುವುದಾಗಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಪ್ರಾದೇಶಿಕ ಗುರಿಗಳ ಮೇಲೆ, ವಿಶೇಷವಾಗಿ ಗಲ್ಫ್ ರಾಷ್ಟ್ರಗಳ ಮೇಲೆ, ಸರಣಿ ದಾಳಿ ನಡೆಸುತ್ತಿದ್ದು, ಪಶ್ಚಿಮ ಏಷ್ಯಾದಲ್ಲಿ ಸಂಕಷ್ಟವನ್ನು ಮತ್ತಷ್ಟು ಗಂಭೀರಗೊಳಿಸಿದೆ. ಟೆಹ್ರಾನ್ ನಲ್ಲಿ ರಾತ್ರಿ ನಂತರ ಇಸ್ರೇಲ್ ದಾಳಿಗಳು ಮತ್ತೆ ಆರಂಭವಾಗಿದ್ದು, ಇಂಧನ ಮೂಲಸೌಕರ್ಯಗಳ ಮೇಲೆ ನಡೆದ ಹಿಂದಿನ ದಾಳಿಗಳ ನಂತರ ಇರಾನ್ ರಾಜಧಾನಿ ಹೊಗೆಯಿಂದ ಆವರಿಸಿಕೊಂಡಿದೆ.

ಅಮೆರಿಕ ಸೇನೆ ಇರಾನ್ ನಾಗರಿಕರು ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಿದ್ದು, ಟೆಹ್ರಾನ್ ನಲ್ಲಿ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಿಂದ ಇರಾನ್ ಡ್ರೋನ್ ಮತ್ತು ಕ್ಷಿಪಣಿಗಳನ್ನು ಉಡಾಯಿಸುತ್ತಿದೆ ಎಂದು ಆರೋಪಿಸಿದೆ. ಇದರಿಂದ ಆ ಪ್ರದೇಶಗಳು ದಾಳಿಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

Mojtaba Khamenei, new Iran's supreme leader.
West Asia conflict: ಇರಾನ್‌ನ ಪ್ರಮುಖ ತೈಲ ಘಟಕ ಮೇಲೆ ಇಸ್ರೇಲ್ ದಾಳಿ; ಗಲ್ಫ್ ರಾಷ್ಟ್ರಗಳ ಮೇಲೆ ಟೆಹ್ರಾನ್ ಯುದ್ಧ; Video

ಸಮುದ್ರದಲ್ಲಿ ತೈಲ ಸಾಗಣೆಗೆ ಕುತ್ತು?

ಸಮುದ್ರದಲ್ಲಿಯೂ ಪರಿಸ್ಥಿತಿ ಗಂಭೀರವಾಗಿದೆ. ಹೋರ್ಮುಜ್ ಸಮುದ್ರಸಂಕುಲದ ಮೂಲಕ ಬಹುತೇಕ ವಾಣಿಜ್ಯ ಹಡಗುಗಳ ಸಂಚಾರವು ತೀರಾ ಕಷ್ಟಕರವಾಗಿದೆ. ಅಧಿಕೃತವಾಗಿ ಮುಚ್ಚಲಾಗಿಲ್ಲವಾದರೂ, ಅಪಾಯ ಹೆಚ್ಚಿರುವ ಕಾರಣ ಹಡಗು ಸಂಚಾರದಲ್ಲಿ ಸುಮಾರು 80 ಶೇಕಡಾ ಕುಸಿತ ಕಂಡುಬಂದಿದೆ. ಯುದ್ಧ ಅಪಾಯ ವಿಮಾ ಶುಲ್ಕಗಳು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ರಮುಖ ಶಿಪ್ಪಿಂಗ್ ಕಂಪನಿಗಳು ಸಂಚಾರವನ್ನು ಸ್ಥಗಿತಗೊಳಿಸಿದ್ದು, ಜಾಗತಿಕ ಸರಕು ಸಾಗಣೆ ಜಾಲಗಳು ಈ ಅಸ್ಥಿರ ಸಮುದ್ರಮಾರ್ಗವನ್ನು ತಪ್ಪಿಸಿ ಪರ್ಯಾಯ ಮಾರ್ಗಗಳನ್ನು ಹುಡುಕಲು ತುರ್ತು ಕ್ರಮ ಕೈಗೊಂಡಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com