ಒಂದೇ ಮರದಲ್ಲಿ ಗೋಪಾಲ ಕೃಷ್ಣ ಅವರು ಬಂಗಿನಾಪಲ್ಲಿ, ಚಿನ್ನ ರಸಂ, ಪೆದ್ದ ರಸಂ, ನಲ್ಲ ರಸಂ, ಚೆರುಕು ರಸಂ, ಹಿಮಾಯತಿ, ಕೊಬ್ಬರಿ ಮಾಮಿಡಿ, ನುಜ್ವಿದ್ ಮಾಮಿಡಿ, ಅಲ್ಫೊನ್ಸೋ, ಪುನಾಸ, ದಶರಿ, ಪಂಡುರು ಮಾಮಿಡಿ, ಕಲೆಕ್ಟರ್, ಜಲಂ, ನೀಲಿಶಾ, ಸುವರ್ಣ ರೇಖಾ, ಪಂಚಡ ರಕಶಂ ಮಲ್ಲಿಕಾ ಎಂಬ ಒಟ್ಟು 18 ಬಗೆಯ ಮಾವಿನ ಹಣ್ಣುಗಳನ್ನು ಬೆಳೆದಿದ್ದು, ಈ ವಿಚಾರ ತಿಳಿಯುತ್ತಿದ್ದಂತೆಯೇ ಅಚ್ಚರಿ ವ್ಯಕ್ತಪಡಿಸುತ್ತಿರುವ ಜನರು, ಇದರ ಬಗ್ಗೆ ಮಾಹಿತಿ ಪಡೆಯಲು ಹಲವಾರು ರೈತರು ಇದೀಗ ಗೋಪಾಲ ಕೃಷ್ಣ ಅವರ ತೋಟಕ್ಕೆ ಭೇಟಿ ನೀಡುತ್ತಿದ್ದಾರೆ. ಇಷ್ಟೇ ಅಲ್ಲದೆ, ಈ ವಿಶಿಷ್ಟ ತೋಟ ಸರ್ಕಾರಿ ಅಧಿಕಾರಿಗಳ ಗಮನವನ್ನೂ ಸೆಳೆಯುತ್ತಿದೆ.