social_icon

ಶಾಲೆಗಳಲ್ಲಿ ಶಿಕ್ಷಕರು, ಮನೆಯಲ್ಲಿ ಪೋಷಕರು ಮಕ್ಕಳಿಗೆ ಹಬ್ಬಗಳ ಮಹತ್ವ ಹೇಳಿಕೊಡಿ: ಡಾ. ಆರತಿ .ವಿ.ಬಿ

ಭಾರತೀಯ ಸಂಸ್ಕೃತಿಯ ಹೆಗ್ಗುರುತು ಹಬ್ಬಹರಿದಿನಗಳು, ಹಬ್ಬ ಎಂದರೆ ಪರ್ವ ಎಂಬ ಶಬ್ದದಿಂದ ಬಂದ ಪದ. ಪರ್ವ ಎಂದರೆ ಬಹಳ ಪ್ರಧಾನವಾದದ್ದು, ಜೀವನದ ನಮ್ಮ ಕಲೆ,ಸಂಸ್ಕೃತಿ, ಸಾಮಾಜಿಕ ಜೀವನ, ಬಂಧು ಮಿತ್ರರೊಂದಿಗಿನ ಒಡನಾಟ, ದೈವಚಿಂತನೆ, ವ್ಯಾಪಾರ, ದಿನ ನಿತ್ಯದ ಜೀವನಗಳು ಗರಿಗೆದರಿ ನಿಲ್ಲುವ ದಿನವನ್ನು ಹಬ್ಬ ಎಂದು ಕರೆಯುತ್ತೇವೆ.

Published: 09th October 2021 04:02 PM  |   Last Updated: 13th October 2021 02:36 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : Online Desk

ಭಾರತೀಯ ಸಂಸ್ಕೃತಿಯ ಹೆಗ್ಗುರುತು ಹಬ್ಬಹರಿದಿನಗಳು, ಹಬ್ಬ ಎಂದರೆ ಪರ್ವ ಎಂಬ ಶಬ್ದದಿಂದ ಬಂದ ಪದ. ಪರ್ವ ಎಂದರೆ ಬಹಳ ಪ್ರಧಾನವಾದದ್ದು, ಜೀವನದ ನಮ್ಮ ಕಲೆ,ಸಂಸ್ಕೃತಿ, ಸಾಮಾಜಿಕ ಜೀವನ, ಬಂಧು ಮಿತ್ರರೊಂದಿಗಿನ ಒಡನಾಟ, ದೈವಚಿಂತನೆ, ವ್ಯಾಪಾರ, ದಿನ ನಿತ್ಯದ ಜೀವನಗಳು ಗರಿಗೆದರಿ ನಿಲ್ಲುವ ದಿನವನ್ನು ಹಬ್ಬ ಎಂದು ಕರೆಯುತ್ತೇವೆ.

ಈ ಹಬ್ಬದಂದು ಅದು ನಾಡಹಬ್ಬ ದಸರಾದಿಂದ ಹಿಡಿದು ಯಾವ ಹಬ್ಬವೇ ಆಗಿರಲಿ ಮನೆಮಂದಿಯೆಲ್ಲಾ ಒಟ್ಟಿಗೆ ಸೇರಿ ಸಂತಸ-ಸಂಭ್ರಮದಿಂದ ಒಟ್ಟಿಗೆ ಕೆಲಸ ಮಾಡಿ, ಒಟ್ಟಿಗೆ ಜತೆಯಲ್ಲಿ ಪೂಜೆ ಮಾಡಿ, ಭಕ್ಷ-ಭೋಜ್ಯಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ಒಟ್ಟಿಗೆ ಕುಳಿತು ಊಟ ಮಾಡುವ, ಒಟ್ಟಿಗೆ ಗೀತ-ನೃತ್ಯ ಮಾಡುತ್ತಾ, ನಕ್ಕು ನಲಿಯುತ್ತಾ ಬೆರೆಯುವ ಸುಸಂದರ್ಭಗಳು ಹಬ್ಬಗಳ ದಿನಗಳು.

ಸಾಮಾನ್ಯವಾಗಿ ಹಬ್ಬಗಳ ಸಮಯದಲ್ಲಿ ಮನುಷ್ಯರ ಮನಸ್ಸಿನಲ್ಲಿ ಹೊಸ ಉತ್ಸಾಹ, ಸಂಭ್ರಮ ಮೂಡುತ್ತದೆ, ಒಂದು ಸಾಮಾಜಿಕ ಬಾಂಧವ್ಯ ಉಂಟಾಗುತ್ತದೆ, ಭಾವೈಕ್ಯ ಮೂಡುತ್ತದೆ, ದೇಶದ, ಸಂಸ್ಕೃತಿಯ ಅಸ್ಮಿತೆ ನಮ್ಮ ಹಬ್ಬಗಳು. 

ಈ ಅರ್ಥಪೂರ್ಣವಾದ ವ್ಯವಸ್ಥೆ ಹಬ್ಬಗಳ ಸಮಯದಲ್ಲಿ ಮನೆಯಲ್ಲಿ ಪೋಷಕರು, ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಇದರ ಮಹತ್ವವನ್ನು, ಹಬ್ಬಗಳ ಆಚರಣೆ, ಸಂಪ್ರದಾಯ, ಪೂಜಾ ವಿಧಾನ, ಆಚಾರ-ವಿಚಾರಗಳು, ನೈವೇದ್ಯ-ಮನೆಯವರೊಂದಿಗೆ, ಅಕ್ಕಪಕ್ಕದ ಮನೆಯವರು, ಬಂಧು-ಮಿತ್ರರೊಂದಿಗೆ ಬೆರೆಯುವುದನ್ನು ಹೇಳಿಕೊಡಬೇಕು. ಹಬ್ಬಗಳ ದಿನ ಮನೆಯಲ್ಲಿ ಮಕ್ಕಳು ತಮ್ಮ ಪಾಡಿಗೆ ಒಂದು ಶರ್ಟ್, ಚಡ್ಡಿ ಧರಿಸಿಕೊಂಡು ಮೊಬೈಲ್, ಟಿವಿ-ಕಂಪ್ಯೂಟರ್ ಮುಂದೆ ಕುಳಿತುಕೊಂಡಿರುವುದು ಸರಿಯಲ್ಲ ಎನ್ನುತ್ತಾರೆ ಧಾರ್ಮಿಕ, ಆಧ್ಯಾತ್ಮಿಕ ಚಿಂತಕಿ ಡಾ.ಆರತಿ.ವಿ.ಬಿ.

ಅವಿಭಕ್ತ ಕುಟುಂಬಗಳಲ್ಲಿ ಕುಟುಂಬ ಸದಸ್ಯರು ಸೇರಿ ಕೆಲಸ ಮಾಡುತ್ತಾರೆ, ಆದರೆ ವಿಭಕ್ತ ಕುಟುಂಬದಲ್ಲಿ ಕಚೇರಿಗಳಲ್ಲಿ ರಜೆ ಸಿಗದಿದ್ದರೆ ಮಹಿಳೆಯರಿಗೂ ಹಬ್ಬಗಳನ್ನು ಆಚರಿಸಲು, ಮಕ್ಕಳಿಗೆ ಹಬ್ಬಗಳ ಮಹತ್ವ ಹೇಳಿಕೊಡಲು ಕಷ್ಟವಾಗುತ್ತದೆ. ಹಬ್ಬಗಳ ದಿನವಾದರೂ ಮನೆಗಳಲ್ಲಿ ಮಕ್ಕಳು ಬೆಳಗ್ಗೆಯೇ ಆಭ್ಯಂಜನ ಮಾಡಿ, ಶುಚಿಯ ಬಣ್ಣದ ಬಟ್ಟೆ ಧರಿಸಿ ಕೈಗೆ ಬಳೆ, ತಲೆಗೂದಲನ್ನು ಚೆನ್ನಾಗಿ ಬಾಚಿಕೊಂಡು ಹೂ ಮುಡಿದು ಅಕ್ಕಪಕ್ಕದ ಮನೆಗಳಿಗೆ ಕುಂಕುಮಕ್ಕೆ ಹೋಗಿ ಅವರನ್ನೂ ಬರಲು ಹೇಳುವ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು. 

ಹಬ್ಬಹರಿದಿನಗಳ ಹಿಂದೆ-ಮುಂದೆ ಶಾಲೆಗಳಲ್ಲಿ ಸಹ ಸಣ್ಣ ಮಕ್ಕಳಿಗೆ ಪರೀಕ್ಷೆ ಇಡುವುದು, ಹಬ್ಬಗಳ ರಜೆಯ ಸಂದರ್ಭದಲ್ಲಿ ಎಲ್ಲಿಗೋ ಪಿಕ್ ನಿಕ್ ಕರೆದುಕೊಂಡು ಹೋಗುವುದು ಸರಿಯಾದ ಸಂಸ್ಕೃತಿ, ಕ್ರಮವಲ್ಲ ಎನ್ನುತ್ತಾರೆ ಅವರು.


Stay up to date on all the latest ಭಕ್ತಿ-ಭವಿಷ್ಯ news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp