ರೈತರ ಅನುಕೂಲಕ್ಕೆ 22 ಸಾವಿರ ಮಾರುಕಟ್ಟೆ ನಿರ್ಮಾಣ, ಗ್ರಾಮೀಣ ಮೂಲಸೌಕರ್ಯಕ್ಕೆ 22ಸಾವಿರ ಕೋಟಿ ಅನುದಾನ ನೀಡಲಾಗಿದೆ. ದೇಶದ ಉತ್ಪಾದನಾ ಸಾಮರ್ಥ್ಯ ಶೇ.15ರಷ್ಟು ಹೆಚ್ಚಳ ನಿರೀಕ್ಷೆ. 470ಎಪಿಎಂಸಿ ಮಾರುಕಟ್ಟೆಗಳು ಆನ್ ಲೈನ್ ಆಗಿವೆ. ಕೃಷಿಕ ಮೂಲಭೂತ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ಆಪರೇಷನ್ ಗ್ರೀನ್ ಯೋಜನೆಯಡಿಯಲ್ಲಿ ಇದು 500 ಕೋಟಿ ರೂ. ಮೀಸಲಿರಸಲಾಗಿದ್ದು, ರೈತರು ಬೆಳೆದ ಹಣ್ಣು, ತರಕಾರಿಗಳ ಸಂಸ್ಕರಣೆಗಾಗಿ ಈ ಯೋಜನೆ ಬಳಕೆ ಮಾಡುತ್ತಿದ್ದಾರೆ. ಆಹಾರ ಸಂಸ್ಕರಣಾ ಕ್ಷೇತ್ರ ಶೇ.8ರಷ್ಟು ಅಭಿವೃದ್ಧಿ ಕಂಡಿದ್ದು, 1290ಕೋಟಿ ರೂಪಾಯಿಯಲ್ಲಿ ಬಿದಿರು ಯೋಜನೆ. ಮೀನುಗಾರಿಕೆ, ಪಶು ಸಂಗೋಪನೆಗೆ 10 ಸಾವಿರ ಕೋಟಿ ರು.ಮೀಸಲಿರಿಸಲಾಗಿದೆ. ಅಂತೆಯೇ ಟೊಮ್ಯಾಟೋ, ಈರುಳ್ಳಿ, ಆಲೂಗಡ್ಡೆ ಕೃಷಿಗೆ 500 ಕೋಟಿ ರೂ ಅನುದಾನ ಘೋಷಣೆ ಜಿಲ್ಲೆಗಳಿಗೆ ವಿಶೇಷ ಕ್ಲಸ್ಟರ್ ಪದ್ಧತಿ, ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದ್ದು, ಬಿದಿರು ಬೆಳೆಗೆ 12,090 ಕೋಟಿ ರೂ ವಿಶೇಷ ಅನುದಾನ ನೀಡಲಾಗಿದೆ ಎಂದು ಜೇಟ್ಲಿ ಹೇಳಿದರು.