ಬಡವರು, ರೈತ ಪರ ಅತ್ಯುತ್ತಮ ಬಜೆಟ್ - ಗೋಯೆಲ್ ಅಭಿನಂದಿಸಿದ ಜೇಟ್ಲಿ

ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯೆಲ್ ಇಂದು ಮಂಡಿಸಿರುವ ಬಜೆಟ್ ಬಡವರು, ರೈತ ಪರವಾಗಿರುವ ಅತ್ಯುತ್ತಮ ಬಜೆಟ್ ಆಗಿದ್ದು, ಮಧ್ಯಮ ವರ್ಗದ ಖರೀದಿ ಸಾಮರ್ಥ್ಯವನ್ನು ಗಟ್ಟಿಗೊಳಿಸಲಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಹಂಗಾಮಿ ಹಣಕಾಸು  ಸಚಿವ ಪಿಯೂಷ್ ಗೋಯೆಲ್ ಇಂದು ಮಂಡಿಸಿರುವ ಬಜೆಟ್  ಬಡವರು, ರೈತ ಪರವಾಗಿರುವ ಅತ್ಯುತ್ತಮ ಬಜೆಟ್ ಆಗಿದ್ದು, ಮಧ್ಯಮ ವರ್ಗದ ಖರೀದಿ ಸಾಮರ್ಥ್ಯವನ್ನು ಗಟ್ಟಿಗೊಳಿಸಲಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

 ಅನಾರೋಗ್ಯದ ಕಾರಣ ಅರುಣ್ ಜೇಟ್ಲಿ ನ್ಯೂಯಾರ್ಕ್ ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದು, ಅವರ ಅನುಪಸ್ಥಿತಿಯಲ್ಲಿ 2019-20 ನೇ ಸಾಲಿನ  ಬಜೆಟ್ ನ್ನು  ಪಿಯೂಷ್ ಗೋಯೆಲ್  ಇಂದು ಮಂಡಿಸಿದ್ದಾರೆ.

ಬಜೆಟ್ ಸಂಬಂಧ ಸರಣಿ ಟ್ವೀಟ್ ಗಳನ್ನು ಪ್ರಕಟಿಸಿರುವ ಅರುಣ್  ಜೇಟ್ಲಿ, 2014ರಿಂದ 2019ರ ನಡುವಿನ ಎಲ್ಲಾ ಬಜೆಟ್ ನಲ್ಲಿಯೂ ಮಧ್ಯಮ ವರ್ಗದ ಜನರಿಗೆ  ಮಹತ್ವದ ಪರಿಹಾರ ನೀಡಲಾಗಿದ್ದು, ಗೋಯೆಲ್ ಮಂಡಿಸಿರುವ ಬಜೆಟ್ , ರೈತ  ಬಡವರ ಪರವಾಗಿದ್ದು, ದೇಶದ ಮಧ್ಯಮ ವರ್ಗದ ಜನರ ಖರೀದಿ ಸಾಮರ್ಥ್ಯವನ್ನು ಗಟ್ಟಿಗೊಳ್ಳಲಿಸಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com