ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಬಜೆಟ್ ನಲ್ಲಿ ಏನೇನೂ ಇಲ್ಲ. ಹೆಚ್ಚಿನ ಮತ ನೀಡಿ ಜನ ಗೆಲ್ಲಿಸಿ ಕಳಿಹಿಸಿದರೂ, ಜನರಿಗೆ ತಕ್ಕಂತೆ ಕೊಡುಗೆ ನೀಡಿಲ್ಲ. ಇದು ಜನ ವಿರೋಧಿ, ರೈತ ವಿರೋಧಿ ಬಜೆಟ್ ಆಗಿದೆ. ನೇರವಾಗಿ ಯಾವುದೇ ಪ್ರಯೋಜನವಾಗಿಲ್ಲ. ಬಜೆಟ್ ನಲ್ಲಿ ಪೆಟ್ರೋಲ್ ಸೆಸ್ ಏರಿಕೆ ಮಾಡಲಾಗಿದೆ. ಇದು ಜನಸಾಮಾನ್ಯರ ಮೇಲೂ ಪರಿಣಾಮ ಬೀರಲಿದೆ. ಜನಸಾಮಾನ್ಯರಿಗೆ ಯಾವುದೇ ಉಪಯೋಗವಿಲ್ಲ. ಉದ್ಯೋಗ, ನೀರಾವರಿಗೂ ಈ ಬಾರಿ ಅವಕಾಶ ನೀಡಿಲ್ಲ ಎಂದು ಕಿಡಿಕಾರಿದರು.