ನವದೆಹಲಿ: ಕೇಂದ್ರ ಹಣಕಾಸು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿಂದು ೨೦೨೦-೨೧ ನೇ ಕೇಂದ್ರ ಬಜೆಟ್ ಮಂಡನೆಯ ವೇಳೆ ಕಾಶ್ಮೀರಿ ಭಾಷೆಯ ಕವನವೊಂದನ್ನು ಉಲ್ಲೇಖಿಸಿ ನಂತರ ಅದರ ಹಿಂದಿ ಅರ್ಥವನ್ನು ವಿವರಿಸಿ ಸದನದ ಸದಸ್ಯರ ಮೆಚ್ಚುಗೆಗೆ ಪಾತ್ರರಾದರು.
"ನಮ್ಮ ದೇಶ ಪುಷ್ಪಗಳು ಅರಳುವ ಉದ್ಯಾನವನವಿದ್ದಂತೆ, ನಮ್ಮ ದೇಶ ಕಮಲ ಅರಳುವ ದಾಲ್ ಸರೋವರವಿದ್ದಂತೆ, ನನ್ನ ದೇಶ ಯುವಕರ ಬಿಸಿ ರಕ್ತವಿದ್ದಂತೆ , ನನ್ನ ದೇಶ, ನಿಮ್ಮ ದೇಶ, ವಿಶ್ವದ ಅತ್ಯಂತ ಪ್ರೀತಿಯ ದೇಶ ಎಂದು ವಿವರಿಸುವ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಪಂಡಿತ ದಿನನಾಥ್ ಕೌಲ್ ಕವನವನ್ನು ನಿರ್ಮಿಲಾ ಸೀತಾರಾಮನ್ ಉಲ್ಲೇಖಿಸಿ ನಿರ್ಮಲಾ ಅವರಿಂದ ಹಿಂದಿ ಭಾಷಾನುವಾದ ಆಲಿಸಿದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸಂತಸ ವ್ಯಕ್ತಪಡಿಸಿದ ದೃಶ್ಯಗಳು ಕಂಡುಬಂದವು.
Advertisement