social_icon

ಹಲವು ಸಂಕಷ್ಟಗಳ ನಡುವೆ ವಿವೇಚನೆಯ ಬಜೆಟ್ ಮಂಡನೆ: ಕುಶಲತೆಯಿಂದ ಆಯವ್ಯಯ ಮಂಡಿಸಿದ ಸಿಎಂ ಸಿದ್ದರಾಮಯ್ಯ

ನೂತನ ಕಾಂಗ್ರೆಸ್ ಸರ್ಕಾರದ ಈ ವರ್ಷದ ಬಜೆಟ್ ಕೆಲವು ಕುತೂಹಲಕಾರಿ ನಿರೀಕ್ಷೆಗಳನ್ನು ಆರಂಭದಲ್ಲಿಯೇ ಸೃಷ್ಟಿಸಿತ್ತು. ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವಲ್ಲಿ ಎದುರಿಸಬಹುದಾದ ಹಣಕಾಸಿನ ತೊಂದರೆಗಳ ಬಗ್ಗೆ ಪ್ರತಿಪಕ್ಷಗಳು ತೀವ್ರ ಗದ್ದಲವೆಬ್ಬಿಸಿದ್ದವು.

Published: 08th July 2023 10:08 AM  |   Last Updated: 08th July 2023 03:34 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : The New Indian Express

ಬೆಂಗಳೂರು: ನೂತನ ಕಾಂಗ್ರೆಸ್ ಸರ್ಕಾರದ ಈ ವರ್ಷದ ಬಜೆಟ್ ಕೆಲವು ಕುತೂಹಲಕಾರಿ ನಿರೀಕ್ಷೆಗಳನ್ನು ಆರಂಭದಲ್ಲಿಯೇ ಸೃಷ್ಟಿಸಿತ್ತು. ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವಲ್ಲಿ ಎದುರಿಸಬಹುದಾದ ಹಣಕಾಸಿನ ತೊಂದರೆಗಳ ಬಗ್ಗೆ ಪ್ರತಿಪಕ್ಷಗಳು ತೀವ್ರ ಗದ್ದಲವೆಬ್ಬಿಸಿದ್ದವು. ಆದರೆ, ಅವರೆಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿ ಮುಖ್ಯಮಂತ್ರಿಗಳು ಮತ್ತು ಹಣಕಾಸು ಇಲಾಖೆಯು ಕುಶಲತೆ ಮತ್ತು ವಿವೇಚನೆಯಿಂದ ಬಜೆಟ್ ಸಿದ್ಧಪಡಿಸಿದೆ ಎಂದು ನಿನ್ನೆ ಮಂಡನೆಯಾದ ಬಜೆಟ್ ನಿಂದ ಗೊತ್ತಾಗಿದೆ.

ಗ್ಯಾರಂಟಿ ಜಾರಿ ನಡುವೆ 238.4 ಸಾವಿರ ಕೋಟಿ ರೂಪಾಯಿಗಳ ಒಟ್ಟು ಆದಾಯದ ಸ್ವೀಕೃತಿಗಳೊಂದಿಗೆ ಬಜೆಟ್ ನ್ನು ಮಂಡಿಸುವಾಗ, ಅದರಲ್ಲಿ ಶೇಕಡಾ 73.7 ಸ್ವಂತ ತೆರಿಗೆಯ ಪ್ರಯತ್ನಗಳಿಂದ ಮತ್ತು 5.24 ಶೇಕಡಾ ತೆರಿಗೆಯೇತರ ಆದಾಯದಿಂದ ಬಂದಿದೆ. 

ರಾಜ್ಯದ ಸ್ವಂತ ತೆರಿಗೆಯಿಂದ 11 ಸಾವಿರ ಕೋಟಿ ಹೆಚ್ಚುವರಿ ಆದಾಯವನ್ನು ಒಳಗೊಂಡಿದೆ (ರೂ. 1,64,652 ಕೋಟಿ ಬಿಇ ವಿರುದ್ಧ ರೂ. 1,75,652 ಕೋಟಿ) ಮತ್ತು ತೆರಿಗೆಯೇತರ ಆದಾಯದಿಂದ 1,500 ಕೋಟಿ ರೂಪಾಯಿ ಬಜೆಟ್ ತನ್ನ ಸ್ವಂತ ತೆರಿಗೆ ಆದಾಯದ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಇದನ್ನೂ ಓದಿ: ರಾಜ್ಯ ಬಜೆಟ್ 2023: ತೆರಿಗೆ ಹೆಚ್ಚಿಸುವ ಮೂಲಕ ಬೊಕ್ಕಸಕ್ಕೆ 1,62,500 ಕೋಟಿ ರೂಪಾಯಿ ಸಂಗ್ರಹಣೆಯ ಗುರಿ

ಗ್ಯಾರಂಟಿ ಯೋಜನೆಗಳಿಗೆ ಸರ್ಕಾರಕ್ಕೆ ಆಗುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ಸಮದೂಗಿಸಲು ಮುಖ್ಯಮಂತ್ರಿಗಳು ಆದಾಯವನ್ನು ಗಳಿಸಲು ಅಬಕಾರಿ ಮತ್ತು ಅಂಚೆಚೀಟಿಗಳು ಮತ್ತು ನೋಂದಣಿ ಶುಲ್ಕವನ್ನು ಆಯ್ಕೆ ಮಾಡಿದ್ದಾರೆ. ಅಬಕಾರಿ ಸುಂಕ (36,000 ಕೋಟಿ ರೂ), ಸ್ಟಾಂಪ್‌ಗಳು ಮತ್ತು ನೋಂದಣಿ ( 25,000 ಕೋಟಿ ರೂ)ಯಲ್ಲಿ ಹೆಚ್ಚಳವಾಗಿದೆ.

15 ನೇ ಹಣಕಾಸು ಆಯೋಗದ ವಿಕೇಂದ್ರೀಕರಣ ಮತ್ತು ಒಟ್ಟು ಅನುದಾನ 13,000 ಕೋಟಿ ರೂಪಾಯಿ ಜೊತೆಗೆ ಜಿಎಸ್‌ಟಿ ಒಳಗೊಂಡಿರುವ ಕೇಂದ್ರ ತೆರಿಗೆಗಳಲ್ಲಿ ರಾಜ್ಯದ ಪಾಲು 37,000 ಕೋಟಿ ರೂಪಾಯಿಗಳಾಗಿದೆ. ಇದರಿಂದ ಕೇಂದ್ರದಿಂದ 50,000 ಕೋಟಿ ರೂಪಾಯಿ ಬರಲಿದೆ.

ಅಲ್ಲದೆ, ರಾಜ್ಯವು ಸುಮಾರು 85,000 ಕೋಟಿ ರೂಪಾಯಿಗಳ ಸಾರ್ವಜನಿಕ ಸಾಲವನ್ನು ಎರವಲು ಪಡೆಯುತ್ತದೆ, ಇದು 2022-23 ರ ಬಜೆಟ್ ಅಂದಾಜಿಗಿಂತ ಸುಮಾರು 19,000 ಕೋಟಿ ರೂಪಾಯಿಯಾಗುತ್ತದೆ. 2023-24ರ ಅವಧಿಯಲ್ಲಿ ಒಟ್ಟು 238.09 ಸಾವಿರ ಕೋಟಿ ರೂಪಾಯಿಗಳಾಗಿದೆ. 305.3 ಸಾವಿರ ಕೋಟಿ ರೂ.ಗಳ ಒಟ್ಟು ವೆಚ್ಚದೊಂದಿಗೆ ಕೊರತೆ ಮತ್ತು ವೆಚ್ಚವನ್ನು ಸ್ಪಷ್ಟವಾಗಿ ನಿರ್ವಹಿಸಿದ್ದಾರೆ. ಇದರಿಂದ 12,522 ಕೋಟಿ ರೂ.ಗಳ ಆದಾಯ ಕೊರತೆ ಉಂಟಾಗಲಿದೆ. ಹಣಕಾಸು ತಜ್ಞರು ಈ ವರ್ಷ ಕೊರತೆಯು ಐದು ಖಾತರಿಗಳ ಮೇಲೆ ಹೊರೆಬೀಳಬಹುದು ಎಂದು ಭಾವಿಸಿದ್ದರು. ಆದರೆ ಸಿಎಂ ಈ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಜೆಟ್ 2023: ರಾಜ್ಯಕ್ಕೆ 7,780 ಕೋಟಿ ರೂ. ನಷ್ಟ; 26,954 ಕೋಟಿ ರೂ. ಜಿಎಸ್'ಟಿ ಕೊರತೆ

ಕಳೆದ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ ನಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 402 ಕೋಟಿ ರೂಪಾಯಿಗಳ ಆದಾಯದ ಹೆಚ್ಚುವರಿಯನ್ನು ಉಳಿಸಿಕೊಂಡರು, ಆದರೆ ಈ ಬಜೆಟ್‌ನಲ್ಲಿ, ಇದು 2,523 ಕೋಟಿ ರೂಪಾಯಿಗಳಾಗಿದೆ. ಒಟ್ಟು ಆದಾಯದ ಸುಮಾರು ಶೇಕಡಾ 5.25 ಅಥವಾ 0.49 ಶೇಕಡಾ ಆಗುವ ನಿರೀಕ್ಷೆಯಿದೆ. ಹಿಂದಿನ ಬಜೆಟ್‌ನಲ್ಲಿ 60,581 ಕೋಟಿ ರೂ.ಗಳಷ್ಟಿದ್ದ ವಿತ್ತೀಯ ಕೊರತೆಯು 66,646 ಕೋಟಿ ರೂ.ಗೆ ಏರಿಕೆಯಾಗಿದೆ, ಇದು ಜಿಎಸ್‌ಡಿಪಿಯ 2.6 ಶೇಕಡಾ ಮತ್ತು ಒಟ್ಟು ಆದಾಯದ ಆದಾಯದ 27.9 ಶೇಕಡಾ ಆಗಿದೆ.


Stay up to date on all the latest ರಾಜ್ಯ ಬಜೆಟ್ news
Poll
N R narayana Murty

ಯಾವುದನ್ನೂ ಫ್ರೀಯಾಗಿ ಕೊಡಬಾರದು ಎಂದು ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp