ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ ತಮ್ಮ ಬಜೆಟ್ 2023-24ರ ಭಾಷಣ ಮಾಡುವಾಗ 'ಮಾಲಿನ್ಯ' ಎಂಬ ಪದದ ಬದಲಿಗೆ 'ರಾಜಕೀಯ' ಎಂದು ಹೇಳಿದರು. ಅವರ ಈ ಹೇಳಿಕೆ ನಗುವನ್ನು ಪ್ರಚೋದಿಸಿತು.
ಬಳಿಕ ಎಚ್ಚೆತ್ತ ಅವರು ಮುಗುಳ್ನಕ್ಕು, ತನ್ನನ್ನು ತಾನು ಸರಿಪಡಿಸಿಕೊಂಡರು ಮತ್ತು ಪರಿಸರ ಸಂರಕ್ಷಣಾ ನೀತಿಯ ಭಾಗವಾಗಿ ಹಳೆಯ ವಾಹನವನ್ನು ಬದಲಿಸುವ ಬಗ್ಗೆ ಮಾತನಾಡುತ್ತಾ 'ಮಾಲಿನ್ಯ' ಎಂಬ ಪದವನ್ನು ಹಲವು ಬಾರಿ ಒತ್ತಿ ಹೇಳಿದರು.
ವಿತ್ತ ಸಚಿವೆ ಈ ವರ್ಷ ಕಂದು ಬಣ್ಣದ ಬಾರ್ಡರ್ನೊಂದಿಗೆ ಕಾಂತಿಯುತ ಕೆಂಪು ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. 2019ರಲ್ಲಿ ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಬಂದ ನಂತರ ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮ್ ಬಜೆಟ್ ಮಂಡನೆ ದಿನ ಕೈಮಗ್ಗ ಸೀರೆಗಳನ್ನು ಧರಿಸುತ್ತಾ ಬಂದಿದ್ದಾರೆ.
Advertisement