ಇಂದು ಬ್ಯಾಂಕ್ ಮುಷ್ಕರ ಇಲ್ಲ

ಸಾರ್ವಜನಿಕ ವಲಯದ ಬ್ಯಾಂಕುಗಳ ನೌಕರರ ಒಕ್ಕೂಟವು ಬುಧವಾರ ನಡೆಸಲು...
ಇಂದು ಬ್ಯಾಂಕ್ ಮುಷ್ಕರ ಇಲ್ಲ
Updated on

ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕುಗಳ ನೌಕರರ ಒಕ್ಕೂಟವು ಬುಧವಾರ ನಡೆಸಲು ಉದ್ದೇಶಿದ್ದ ಬ್ಯಾಂಕ್ ಮುಷ್ಕರವನ್ನು ಮುಂದೂಡಿದೆ.

ವೇತನ ಹೆಚ್ಚಳ ಮತ್ತು ಇತರೆ ವಿಚಾರಗಳಿಗೆ ಸಂಬಂಧಿಸಿ ಆಡಳಿತ ಮಂಡಳಿ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಜತೆಗೆ, ವೇತನ ಹೆಚ್ಚಳದ ಆಫರ್ ಅನ್ನು ಶೇ.11ರಿಂದ 12.5ಕ್ಕೇರಿಸಲು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ) ಒಪ್ಪಿದೆ.

ಹೀಗಾಗಿ ಬುಧವಾರ ಕರೆ ನೀಡಿದ್ದ ಮುಷ್ಕರ ವನ್ನುಮುಂದೂಡಲಾಗಿದೆ ಎಂದು ನೌಕರರ ಒಕ್ಕೂಟದ ಸಂಚಾಸಲಕ ಎಂ ವಿ ಮುರಳಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com