ನವದೆಹಲಿ: ವಜ್ರ, ಹರಳು ಮತ್ತು ಚಿನ್ನಾಭರಣಗಳ ರಫ್ತು ಹೆಚ್ಚಿಸಲು ಚಿನ್ನದ ಆಮದು ದರ ಕಡಿಮೆಗೊಳಿಸುವ ಕುರಿತು ಹಣಕಾಸು ಸಚಿವಾಲಯ ಪರಿಶೀಲನೆ ನಡೆಸಬೇಕೆಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವರಾದ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಚಿನ್ನಕ್ಕೆ ಆಮದು ದರ ನಿಗದಿ ರದ್ದುಗೊಳಿಸುವತ್ತಲೂ ನೋಟ ಹರಿಸಲು ಕೋರಿದ್ದೇನೆ ಎಂದಿದ್ದಾರೆ. ಚಿನ್ನದ ಮೇಲೆ ಶೇ.10 ಸೀಮಾ ಸುಂಕ ವಿಧಿಸುವುದರಿಂದ ದೇಶಿ ವರ್ತಕರು ಜಾಗತಿಕ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.