ಜಯಂತ್ ಸಿನ್ಹಾ
ಜಯಂತ್ ಸಿನ್ಹಾ

ನೌಕರರ ಭವಿಷ್ಯ ನಿಧಿ ತೆರಿಗೆ; ಸಂದೇಹಗಳಿಗೆ ಸ್ಪಷ್ಟೀಕರಣ ಶೀಘ್ರದಲ್ಲೆ: ವಿತ್ತ ಸಚಿವಾಲಯ

ನೌಕರರ ಭವಿಷ್ಯ ನಿಧಿ (ಇಪಿಎಫ್) ಹಣ ಹಿಂಪಡೆಯಲು ನಿರ್ಧರಿಸಿದರೆ, ಆ ಪೈಕಿ ಶೇ.60 ರಷ್ಟು ಮೊತ್ತಕ್ಕೆ ತೆರಿಗೆ ಕಟ್ಟಬೇಕು. ಏಪ್ರಿಲ್ 1 ರಿಂದ ಇಪಿಎಫ್ ಕಟ್ಟುವ...
Published on
ನವದೆಹಲಿ: ನೌಕರರ ಭವಿಷ್ಯ ನಿಧಿ (ಇಪಿಎಫ್) ಹಣ ಹಿಂಪಡೆಯಲು ನಿರ್ಧರಿಸಿದರೆ, ಆ ಪೈಕಿ ಶೇ.60 ರಷ್ಟು ಮೊತ್ತಕ್ಕೆ ತೆರಿಗೆ ಕಟ್ಟಬೇಕು. ಏಪ್ರಿಲ್ 1 ರಿಂದ ಇಪಿಎಫ್ ಕಟ್ಟುವ ಹಣಕ್ಕೆ ಇದು ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಸೋಮವಾರ ಮಂಡಿಸಿದ ಬಜೆಟ್ ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದರು. ಸರ್ಕಾರದ ಈ ನಿರ್ಧಾರಕ್ಕೆ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಜನರ ಸಂದೇಹಗಳಿಗೆ ಸ್ಪಷ್ಟವಾದ ವಿವರಣೆಯನ್ನು ಶೀಘ್ರವೇ ನೀಡುತ್ತೇವೆ ಎಂದು ಕೇಂದ್ರ ವಿತ್ತ ಸಚಿವಾಲಯದ ರಾಜ್ಯ ಸಚಿವ  ಜಯಂತ್ ಸಿನ್ಹಾ ಮಂಗಳವಾರ ಹೇಳಿದ್ದಾರೆ.
ಸರ್ಕಾರದ ಈ ನಿರ್ಧಾರವು 6 ಕೋಟಿ ಉದ್ಯೋಗಿಗಳಿ ಹೊರೆಯಾಗಿ ಪರಿಣಮಿಸಿದೆ.  ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್ )ಯಲ್ಲಿರುವ ಶೇ. 60ರಷ್ಟು ಮೊತ್ತಕ್ಕೆ ಮಾತ್ರ ತೆರಿಗೆ ವಿಧಿಸಲು ಸರ್ಕಾರ ತೀರ್ಮಾನಿಸಿತ್ತು.
ಈ ಬಗ್ಗೆ ಜನರ ಆತಂಕಗಳ ನಮ್ಮ ಗಮನಕ್ಕೆ ಬಂದಿದೆ. ಈ ಕಾರಣದಿಂದಲೇ ನಾವು ಹೆಚ್ಚಿನ ವಿವರಣೆಗಳನ್ನು ನೀಡಬಯಸಿದ್ದೇವೆ. ಅಗತ್ಯ ಬಂದರೆ ಬಜೆಟ್ ನಿರ್ದೇಶನಗಳಲ್ಲಿ ಬದಲಾವಣೆಯನ್ನೂ ಮಾಡುತ್ತೇವೆ. ಇದರಿಂದಾಗಿ ಸದ್ಯದ ನೌಕರರ ಭವಿಷ್ಯ ನಿಧಿಯನ್ನು ಇದು ಬಾಧಿಸುವುದಿಲ್ಲ ಎಂದು ಎಂದು ಸಿನ್ಹಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com