ಅಂತರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕಿನ ವಾರ್ಷಿಕ ಸಭೆಯಲ್ಲಿ ಭಾಗವಹಿಸಲು ವಾರಗಳ ಅಮೆರಿಕಾ ಪ್ರವಾಸದಲ್ಲಿರುವ ಅರುಣ್ ಜೇಟ್ಲಿ, ನೋಟುಗಳ ಅಮಾನ್ಯತೆ ವಿಷಯವನ್ನು ರಹಸ್ಯವಾಗಿಡದೆ ಮೊದಲೇ ತಿಳಿಸಿದ್ದರೆ ಜನರು ಚಿನ್ನ, ವಜ್ರ, ಭೂಮಿ ಖರೀದಿಸಿ ತಮ್ಮಲ್ಲಿರುವ ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳುತ್ತಿದ್ದರು. ಇದಕ್ಕಾಗಿ ಪಾರದರ್ಶಕತೆ ಕಾಪಾಡುವ ಸಲುವಾಗಿ ವಂಚನೆಯನ್ನು ತಡೆಗಟ್ಟಲು ಈ ಕ್ರಮವನ್ನು ಸರ್ಕಾರ ಕೈಗೊಂಡಿತು ಎಂದರು.