ತಮ್ಮನ್ನು ಸುಸ್ತಿದಾರ ಎಂದು ಬ್ರಾಂಡ್ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ವಿಜಯ್ ಮಲ್ಯ, ರಾಜಕಾರಣಿಗಳು, ಮಾಧ್ಯಮದವರು ನನ್ನನ್ನು ಪಿಎಸ್ ಯು ಬ್ಯಾಂಕ್ ಹಣದೊಂದಿಗೆ ಓಡಿ ಹೋಗುವವನ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಇದೆಲ್ಲಾ ಸುಳ್ಳು. ನಾನು ಒಟ್ಟಾರೆ ಪ್ರಕರಣದ ಇತ್ಯರ್ಥಕ್ಕೆ ಕರ್ನಾಟಕ ಹೈಕೋರ್ಟ್ ಮುಂದಿಟ್ಟಿರುವ ಪ್ರಸ್ತಾವನೆಗೆ ಏಕೆ ಇಷ್ಟೇ ಪ್ರಚಾರ ಸಿಕ್ಕುವುದಿಲ್ಲ ಎಂದು ಮಲ್ಯ ಪ್ರಶ್ನಿಸಿದ್ದಾರೆ.