ಪತಂಜಲಿ ಆಯುರ್ವೇದ್ ಲಿಮಿಟೆಡ್ ಅನ್ನು 2006 ರಲ್ಲಿ ರಾಮ್ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಸೇರಿ ಪ್ರಾರಂಭಿಸಿದ್ದರು. ಪತಂಜಲಿ ಸಂಸ್ಥೆಯು ಮುಖ್ಯವಾಗಿ ಖನಿಜ ಮತ್ತು ಗಿಡಮೂಲಿಕೆ ಉತ್ಪನ್ನಗಳನ್ನು ತಯಾರಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ರಾಚೀನ ಜ್ಞಾನಕ್ಕೆ ಅನುಗುಣವಾಗಿ ಮತ್ತು ಅದರ ಸಹಕಾರದಲ್ಲಿ ಆಯುರ್ವೇದದ ವಿಜ್ಞಾನವನ್ನು ಸ್ಥಾಪಿಸುವ ಉದ್ದೇಶದೊಂದಿಗೆ ಬಾಬಾ ರಾಮ್ದೇವ್ ಸ್ಥಾಪಿಸಿದ್ದರು.