ಈಗಾಗಲೇ ಇದರ ಸುಳಿವು ಕಾಣುತ್ತಿದ್ದು, ಈಗಾಗಲೇ ದೇಶದಲ್ಲಿ ತಾಮ್ರದ ಆಮದಿನ ಪ್ರಮಾಣ ಹೆಚ್ಚಾಗಿದೆ. ಅಲ್ಲದೆ ತಾಮ್ರದ ದರ ಕೂಡ ಕ್ರಮೇಣ ಹೆಚ್ಚಾಗುತ್ತಿದ್ದು, ಭವಿಷ್ಯದಲ್ಲಿ ತಾಮ್ರದ ದರ ಗಗನಕ್ಕೇರುವ ಎಲ್ಲ ಲಕ್ಷಣಗಳೂ ಇವೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಈ ಬೆಳವಣಿಗೆಗೆ ತೂತುಕುಡಿಯಲ್ಲಿರುವ ತಾಮ್ರದ ಉತ್ಪಾದನಾ ಘಟಕಕ್ಕೆ ಬೀಗಮುದ್ರೆ ಬಿದ್ದಿರುವುದೇ ಕಾರಣ ಎಂದು ಹೇಳಲಾಗುತ್ತಿದ್ದು, ಈ ಘಟಕದಿಂದ ಷೇ.40ರಷ್ಟು ತಾಮ್ರದ ಉತ್ಪಾದನೆಯಾಗುತ್ತಿತ್ತು. ಆದರೀಗ ಸಂಸ್ಥೆಗೆ ಬೀಗ ಮುದ್ರೆ ಬಿದ್ದಿರುವುದರಿಂದ ದೇಶಕ್ಕೆ ಶೇ.40ರಷ್ಟು ತಾಮ್ರದ ಉತ್ಪಾದನೆಯ ಕೊರತೆ ಉಂಟಾಗಲಿದೆ.