ಖಾಸಗೀಕರಣಗೊಳಿಸದಿದ್ದರೆ ಏರ್ ಇಂಡಿಯಾ ಸಂಸ್ಥೆ ಬಂದ್: ನಾಗರಿಕ ವಿಮಾನಯಾನ ಸಚಿವ 

ಏರ್ ಇಂಡಿಯಾ ಖಾಸಗೀಕರಣ ಪ್ರಕ್ರಿಯೆ ವಿಫಲವಾದರೆ ಸಂಸ್ಥೆ ಮುಚ್ಚುವುದಾಗಿ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಏರ್ ಇಂಡಿಯಾ
ಏರ್ ಇಂಡಿಯಾ

ನವದೆಹಲಿ: ಏರ್ ಇಂಡಿಯಾ ಖಾಸಗೀಕರಣ ಪ್ರಕ್ರಿಯೆ ವಿಫಲವಾದರೆ ಸಂಸ್ಥೆ ಮುಚ್ಚುವುದಾಗಿ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.


ರಾಜ್ಯಸಭೆಯಲ್ಲಿ ಈ ಕುರಿತು ನಿನ್ನೆ ಉತ್ತರಿಸಿದ ಸಚಿವರು, ಉದ್ಯೋಗಿಗಳಿಗೆ ಒಪ್ಪಿಕೆಯಾಗುವ ಒಪ್ಪಂದವನ್ನು ಖಾತ್ರಿಪಡಿಸಲಾಗುತ್ತಿದೆ ಸರ್ಕಾರ ಉದ್ಯೋಗಿಗಳ ಹಿತ ಕಾಪಾಡಲಿದೆ ಎಂದು ಹೇಳಿದರು. 


ಖಾಸಗೀಕರಣಗೊಳಿಸುವ ಪ್ರಕ್ರಿಯೆಯನ್ನು ಸರ್ಕಾರ ಅಂತಿಮಗೊಳಿಸುತ್ತಿದ್ದು ಉದ್ಯೋಗಿಗಳ ಹಿತ ಕಾಪಾಡಲಾಗುವುದು. ಖಾಸಗೀಕರಣವಾಗುವವರೆಗೆ ಯಾರೂ ಉದ್ಯೋಗ ಕಳೆದುಕೊಳ್ಳುವುದಿಲ್ಲ, ಆತಂಕ ಬೇಡ ಎಂದರು.


ಬಂಡವಾಳ ಹೂಡಿಕೆ ಹಿಂತೆಗೆತ ಪ್ರಕ್ರಿಯೆ ನಡೆಯುತ್ತಿದೆ. ಈ ಪ್ರಕ್ರಿಯೆ ಮುಗಿದ ನಂತರವಷ್ಟೇ ಬಿಡ್ ಖರೀದಿ ನಡೆಯಲಿದೆ. ಇಲ್ಲಿಯವರೆಗೆ ಬದಲಿ ಕ್ರಮವನ್ನು ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಮಾಡಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com