ಆರ್ಥಿಕ ಮುಗ್ಗಟ್ಟು ಎದುರಿಸಿರುವ ಯೆಸ್ ಬ್ಯಾಂಕಿಗೆ 18,564 ಕೋಟಿ ರೂ ನಷ್ಟ!

ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಯೆಸ್ ಬ್ಯಾಂಕ್ ಡಿಸೆಂಬರ್ ತ್ರೈಮಾಸಿಕದಲ್ಲಿ 18,654 ಕೋಟಿ ರೂ.ಗಳ ನಷ್ಟದ ವರದಿ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಯೆಸ್ ಬ್ಯಾಂಕ್ ಡಿಸೆಂಬರ್ ತ್ರೈಮಾಸಿಕದಲ್ಲಿ 18,654 ಕೋಟಿ ರೂ.ಗಳ ನಷ್ಟದ ವರದಿ ಮಾಡಿದೆ.

ಒಟ್ಟು ಅನುತ್ಪಾದಕ ಆಸ್ತಿಗಳು ಳು ಡಿಸೆಂಬರ್ 31, 2019 ರ ವೇಳೆಗೆ 40,709 ಕೋಟಿ ರೂ. ಇದ್ದು ಇದು ಒಟ್ಟಾರೆ ಶೇ.18.87 ಪ್ರಮಾಣದಲ್ಲಿದೆ.ಅಲ್ಲದೆ ಇದಕ್ಕೆ ಹಿಂದಿನ ಸೆಪ್ಟೆಂಬರ್ ತ್ರೈಮಾಸಿಕದ 17,134 ಕೋಟಿ ರೂ. ಅಥವಾ ಶೇ. 7.39 ರ ಪ್ರಮಾಣಕ್ಕೆ ಹೋಲಿಸಿದರೆ ಈ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಮಾರ್ಚ್ 5 ರಂದು ಬ್ಯಾಂಕಿನ ನಿರ್ದೇಶಕ ಮಂಡಳಿಯನ್ನು  ಸರ್ಕಾರ ರದ್ದುಗೊಳಿಸಿತು ಮತ್ತು ಆರ್‌ಬಿಐ ಎಸ್‌ಬಿಐನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಪ್ರಶಾಂತ್ ಕುಮಾರ್ ಅವರನ್ನು ನಿರ್ವಾಹಕರಾಗಿ ನೇಮಿಸಿತ್ತು.

ಬಂಡವಾಳವನ್ನು ಸಂಗ್ರಹಿಸಲು ಅಸಮರ್ಥವಾಗಿದ್ದೇ ಯೆಸ್ ಬ್ಯಾಂಕಿನ ಇಂದಿನ ಸ್ಥಿತಿಗೆ ಪ್ರಾಥಮಿಕ ಕಾರಣವೆಂದು ಉಲ್ಲೇಖಿಸಲಾಗಿದೆ, ಇದಕ್ಕಾಗಿ ಬ್ಯಾಂಕನ್ನು ಒಂದು ತಿಂಗಳ ಕಾಲ ನಿಷೇಧದಡಿಯಲ್ಲಿಟ್ಟು ಪ್ರತಿ ಖಾತೆಗೆ 50,000 ರೂ.ಗ ಮಾತ್ರ ಹಿಂಪಡೆಯುವ ಅವಕಾಶ ಕಲ್ಪಿಸಲಾಗಿದೆ. 

ಇದೀಗ ಬ್ಯಾಂಕು ತಡವಾಗಿಯಾದರೂ ತನ್ನ ತ್ರೈಮಾಸಿಕ ವರದಿಯನ್ನು ಬಹಿರಂಗಪಡಿಸಿದ್ದು ಬ್ಯಾಂಕಿನ  ಸಹ-ಸಂಸ್ಥಾಪಕ ಮುಖ್ಯ ಕಾರ್ಯನಿರ್ವಾಹಕ ರಾಣಾ ಕಪೂರ್ ಅವರ ನೇತೃತ್ವದ ಕಾರ್ಪೊರೇಟ್ ಆಡಳಿತದ ಅಸಮರ್ಥತೆ ಕಾರಣ ಅವರನ್ನು ಕಳೆದ ವಾರಾಂತ್ಯದಲ್ಲಿ ಜಾರಿ ನಿರ್ದೇಶನಾಲಯವು ಬಂಧಿಸಿತ್ತು ಮತ್ತು ಸಿಬಿಐ ಶುಕ್ರವಾರ  ರಾಣಾ ವಿರುದ್ಧ ಹೊಸ ಪ್ರಕರಣ ದಾಖಲಿಸಿದೆ.

ಡಿಸೆಂಬರ್ ತ್ರೈಮಾಸಿಕದಲ್ಲಿ, ಸಾಮಾನ್ಯ ಇಕ್ವಿಟಿ ಶ್ರೇಣಿ -1 ಅನುಪಾತವು ಶೇಕಡಾ 7.375 ರ ಕಡ್ಡಾಯ ಅಗತ್ಯಕ್ಕೆ ಹೋಲಿಸಿದರೆ ಶೇಕಡಾ 0.6 ಕ್ಕೆ ಇಳಿದಿದೆಅಲ್ಲದೆ ಬ್ಯಾಂಕಿನ ದ್ರವ್ಯತೆ ಅನುಪಾತಗಳ ಉಲ್ಲಂಘನೆಯಾಗಿದೆ ಎಂದು ಅದು ವರದಿಯಲ್ಲಿ ಹೇಳಿದೆ. ಹಣಕಾಸಿನ ಒತ್ತಡ ಮತ್ತು ಆರ್‌ಬಿಐ ಕೈಗೊಂಡ ಕ್ರಮಗಳು ಠೇವಣಿದಾರರ ವಿಶ್ವಾಸದ ಮೇಲೆ ಪರಿಣಾಮ ಬೀರಬಹುದು ಮತ್ತು ವಾಪಸಾತಿ ನಡವಳಿಕೆಯು "ಅನಿಶ್ಚಿತ" ವಾಗಿರುತ್ತದೆ ಎಂದು ಲೆಕ್ಕಪರಿಶೋಧಕರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com