ನವದೆಹಲಿ: ಯೆಸ್ ಬ್ಯಾಂಕಿನ ಆಡಳಿತಾಧಿಕಾರಿ ಪ್ರಶಾಂತ್ ಕುಮಾರ್ ಅವರನ್ನು ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮಾಜಿ ಅಧ್ಯಕ್ಷ ಕಾರ್ಯನಿರ್ವಾಹೇತರ ಅಧ್ಯಕ್ಷರಾಗಲಿದ್ದು, ಮಹೇಶ್ ಕೃಷ್ಣಮೂರ್ತಿ ಮತ್ತು ಅತುಲ್ ಬೆಡಾ ಅವರನ್ನು ಇಬ್ಬರು ಸ್ವತಂತ್ರ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ಯೆಸ್ ಬ್ಯಾಂಕ್ ಮೇಲೆ ಹೇರಲಾಗಿರುವ ನಿಷೇಧ ಮಾರ್ಚ್ 18ರಂದು ಸಂಜೆ 6 ಗಂಟೆಗೆ ತೆಗೆದುಹಾಕಲಾಗುತ್ತದೆ. ಯೆಸ್ ಬ್ಯಾಂಕಿನಲ್ಲಿ ಹೂಡಿಕೆ ಮಾಡುತ್ತಿರುವ ಎಸ್ ಬಿಐ ಮತ್ತು ಇತರ ಹೂಡಿಕೆದಾರರಿಗೆ ತೆರಿಗೆಗಳಿಂದ ವಿನಾಯ್ತಿ ನೀಡಲಾಗುತ್ತದೆ.
Advertisement