ಬೈಕ್‌ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ 'ಪಿಕೆ' ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ

ಬಾಲಿವುಡ್‌ ನ ಖ್ಯಾತ ನಿರ್ದೇಶಕ ರಾಜಕುಮಾರ್‌ ಹಿರಾನಿ ಅವರು ಬೈಕ್‌ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ...
ರಾಜಕುಮಾರ್ ಹಿರಾನಿ
ರಾಜಕುಮಾರ್ ಹಿರಾನಿ
ಮುಂಬೈ: ಬಾಲಿವುಡ್‌ ನ ಖ್ಯಾತ ನಿರ್ದೇಶಕ ರಾಜಕುಮಾರ್‌ ಹಿರಾನಿ ಅವರು ಬೈಕ್‌ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 
ರಾಜಕುಮಾರ್ ಹಿರಾನಿ ಪ್ರಾಣಾಪಾಯದಿಂದ ಪಾರಾಗಿದ್ದು, ಬಾಂದ್ರಾದ ಲೀಲಾವತಿ ಆಸ್ಪತ್ರೆಗೆ ಸೇರಿಸಲಾಗಿದೆ. ಮುಖ, ದವಡೆ, ಗದ್ದಕ್ಕೆ ತೀವ್ರ ಗಾಯಗಳಾಗಿರುವುದರಿಂದ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.
ರಾಜಕುಮಾರ್ ಹಿರಾನಿ ಅವರ ನೌಕರನೊಬ್ಬ ಹೊಸ ಬೈಕನ್ನು ಖರೀದಿಸಿದ್ದು, ಒಮ್ಮೆ ರೈಡ್‌ ಮಾಡಿ ಎಂದು ಕೇಳಿಕೊಂಡಿದ್ದಾನೆ. ಬೈಕ್ ಹತ್ತಿದ ಅವರು ಬೈಕಿನ ಭಾರವನ್ನು ನಿಭಾಯಿಸಲಾಗದೆ ರಸ್ತೆಗೆ ಉರುಳಿ ಬಿದ್ದಿದ್ದಾರೆ. ಈ ವೇಳೆ ಬೈಕ್‌ ಅವರ ಮೇಲೆಯೇ ಬಿತ್ತು ಎಂದು ನೌಕರ ತಿಳಿಸಿದ್ದಾನೆ. 
ಹಿರಾನಿ ಅವರು ಮುನ್ನಾ ಭಾಯಿ ಎಂಬಿಬಿಎಸ್‌, ಲಗೇ ರಹೋ ಮುನ್ನಾಭಾಯಿ, ತ್ರೀ ಈಡಿಯಟ್ಸ್‌ ಮತ್ತು ಪಿಕೆ ಯಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com