ಮೊಹೆಂಜೊದಾರೊ ಯುಗದಲ್ಲಿ ಬಾಳಿ ಬದುಕಿದ್ದ ಮಾನವರ ಕತೆಯಿದು ಎಂದು ನಾವು ಊಹಿಸಬಹುದು. ಆ ಕಾಲದಲ್ಲಿ ಬಲಿಷ್ಠ ಜೀವಿಯ ಉಳಿವು ಎಂಬುದು ಕೇವಲ ತತ್ವವಾಗಿರದೆ ಜೀವನದ ಹೋರಾಟವಾಗಿದ್ದ ಕಾಲ. ಆ ಯುಗಕ್ಕೆ ತಕ್ಕಂತೆ ಕತೆಯಿದೆ. ಅದಕ್ಕನುಗುಣವಾಗಿ ಹೃತಿಕ್ನ ಮೈಮೇಲೆ ಚರ್ಮದ ಉಡುಪನ್ನೂ ಗುಹೆಯೊಂದರಲ್ಲಿ ಆತನ ಪ್ರಣಯದ ದೃಶ್ಯವನ್ನೂ ನಾವು ನೋಡಬಹುದು. ಜೋಧಾ ಅಕ್ಬರ್ನಲ್ಲಿ ಹೃತಿಕ್ನನ್ನು ಆನೆಯೊಂದರ ಜತೆ ಹೋರಾಟಕ್ಕಿಳಿಸಿದ್ದ ಅಶುತೋಷ್ ಗೋವಾರಿಕರ್ ಈ ಬಾರಿ ಮೊಸಳೆ ಇಟ್ಟಿದ್ದಾನೆ. ಮಜಾ ತಗೊಳ್ಳೋಣ ಬಿಡಿ.