ಈಗ ಯೂ ಟರ್ನ್ ಹೊಡೆದಿರುವ ಕಲಾವಿದರ ಸಂಘ, ತನುಶ್ರೀ ದತ್ತ ಮರು ತನಿಖೆ ಮಾಡುವಂತೆ ಕೇಳಿಕೊಂಡರೆ ಪಾರದರ್ಶಕ ತನಿಖೆ ನಡೆಸುತ್ತೇವೆ ಮತ್ತು ಅವರಿಗೆ ಎಲ್ಲಾ ರೀತಿಯ ಬೆಂಬಲ ನೀಡುತ್ತೇವೆ. ಆದರೆ ಅವರು ಇದುವರೆಗೆ ಅಧಿಕೃತವಾಗಿ ನಮ್ಮ ಬಳಿ ಬಂದಿಲ್ಲ. ಆದಾಗ್ಯೂ ನಾವು ಅವರೊಂದಿಗೆ ಮಾತನಾಡಿದ್ದೇವೆ ಮತ್ತು ಪತ್ರ ಬರೆದಿದ್ದೇವೆ ಎಂದು ಕಲಾವಿದರ ಸಂಘದ ಜಂಟಿ ಕಾರ್ಯದರ್ಶಿ ಅಮಿತ್ ಬೆಹ್ಲ್ ಹೇಳಿದ್ದಾರೆ.