ಉತ್ತರ ಪ್ರದೇಶದ 850 ರೈತರ ಸಾಲ ತೀರಿಸಲಿದ್ದಾರೆ 'ಬಾಲಿವುಡ್ ಬಿಗ್ ಬಿ' ಅಮಿತಾಬ್ ಬಚ್ಚನ್!

ಉತ್ತರ ಪ್ರದೇಶದ 850 ಕ್ಕೂ ಹೆಚ್ಚಿನ ರೈತರ ಸಾಲವನ್ನು ತಾನು ತೀರಿಸುವುದಾಗಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತಿಳಿಸಿದ್ದಾರೆ.
ಅಮಿತಾಭ್ ಬಚ್ಚನ್
ಅಮಿತಾಭ್ ಬಚ್ಚನ್
Updated on
ಮುಂಬೈ: ಉತ್ತರ ಪ್ರದೇಶದ 850 ಕ್ಕೂ ಹೆಚ್ಚಿನ ರೈತರ ಸಾಲವನ್ನು ತಾನು ತೀರಿಸುವುದಾಗಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತಿಳಿಸಿದ್ದಾರೆ.
ಇದಕ್ಕೆ ಹಿಂದೆ ಮಹಾರಾಷ್ಟ್ರದ 350 ರೈತರಿಗೆ ಸಹಾಯ ಮಾಡಿದ್ದ ಅಮಿತಾಬ್ ಬಚ್ಚನ್ ಇದೀಗ ಉತ್ತರ ಪ್ರದೇಶದ ರೈತರ ಸಾಲ ತೀರಿಸಿಅಲು ಮುಂದಾಗಿದ್ದಾರೆ.
ಇದಾಗಲೇ ಅಮಿತಾಬ್ ಸಾಲ ತೀರಿಸಬೇಕಾಗಿರುವ ರೈತರನ್ನು ಗುರುತಿಸಲಾಗಿದೆ. "ಒಟ್ಟಾರೆ 5.5 ಕೋಟಿ ರೂಸಾಲವನ್ನು ತೀರಿಸುವುದಕ್ಕೆ ಸಂಬಂಧಿಸಿದ ಬ್ಯಾಂಕ್ ಗಳಿಡನೆ ಮಾತನಾಡಲಿದ್ದೇನೆ" ಅಮಿತಾಬ್ ತಮ್ಮ ಬ್ಲಾಗ್ ಸ್ಪಾಟ್ ನಲ್ಲಿ ಬರೆದುಕೊಂಡಿದ್ದಾರೆ.
ಕೌನ್ ಬನೇಗಾ ಕರೋಡ್ ಪತಿ(ಕೆಬಿಸಿ) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಜೀತ್ ಸಿಂಗ್ ಅವರಿಗೆ ಸಹಾಯ ಮಾಡಲಾಗುವುದು ಎಂದು ಅವರು ಬರೆದುಕೊಂಡಿದ್ದಾರೆ."ಬಲವಂತದಿಂದ ವೇಶ್ಯಾವೃತ್ತಿಗೆ ತಳ್ಳಲ್ಪಟ್ಟ ಮಹಿಳೆಯರ ರಕ್ಷಣೆಗೆ ದುಡಿಯುತ್ತಿರುವ ಸಾಮಾಜಿಕ ಕಾರ್ಯಕರ್ತ ಅಜಿತ್ ಸಿಂಗ್ ಅವರಿಗೆ ನನ್ನ ಕೊಡುಗೆ ಸಲ್ಲುತ್ತದೆ" ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com