ಇಂದೋರ್ ನಲ್ಲಿ ಆನಂದ್ ಮೋಹನ್ ಮಥುರ್ ಚಾರಿಟೇಬಲ್ ಟ್ರಸ್ಟ್ ಶಬಾನಾ ಆಜ್ಮಿಯವರು ಮಹಿಳೆಯರ ಪರ ಮಾಡಿರುವ ಕೆಲಸಕ್ಕೆ ಕುಂತಿ ಮಥುರ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅದನ್ನು ಸ್ವೀಕರಿಸಿ ಮಾತನಾಡಿದ ಶಬಾನಾ ಆಜ್ಮಿ, ದೇಶದ ಹಿತಾಸಕ್ತಿಗಾಗಿ ಇಲ್ಲಿನ ಇತಿಮಿತಿಗಳ ಬಗ್ಗೆ ಮಾತನಾಡಬೇಕು. ನಮ್ಮ ಇತಿಮಿತಿ, ಕೊರತೆಗಳ ಬಗ್ಗೆ ಮಾತನಾಡದಿದ್ದರೆ ಪರಿಸ್ಥಿತಿ ಹೇಗೆ ಸುಧಾರಣೆಯಾಗುತ್ತದೆ ಎಂದು ಶಬಾನಾ ಪ್ರಶ್ನಿಸಿದರು.