ಲಾಕ್ ಡೌನ್ ನಡುವೆ ರಿಷಿ ಕಪೂರ್ ಪುತ್ರಿ ಮುಂಬೈಗೆ ತೆರಳಲು ದೆಹಲಿ ಪೊಲೀಸರ ಅನುಮತಿ

ಕೊವಿಡ್-19  ಲಾಕ್ ಡೌನ್ ನಡುವೆಯೂ ಗುರುವಾರ ಬೆಳಗ್ಗೆ ನಿಧನರಾದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅವರ ಪುತ್ರಿ ರಿಧಿಮಾ ಸಹ್ನಿ ಅವರಿಗೆ ಮುಂಬೈಗೆ ತೆರಳಿ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಿಷಿ ಕಪೂರ್, ಪುತ್ರಿ ರಿಧಿಮಾ
ರಿಷಿ ಕಪೂರ್, ಪುತ್ರಿ ರಿಧಿಮಾ

ನವದೆಹಲಿ: ಕೊವಿಡ್-19  ಲಾಕ್ ಡೌನ್ ನಡುವೆಯೂ ಗುರುವಾರ ಬೆಳಗ್ಗೆ ನಿಧನರಾದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅವರ ಪುತ್ರಿ ರಿಧಿಮಾ ಸಹ್ನಿ ಅವರಿಗೆ ಮುಂಬೈಗೆ ತೆರಳಿ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಿಧಿಮಾ ಹಾಗೂ ಇತರ ಐವರು, ಭರತ್ ಸಹ್ನಿ, ಸಮರ ಸಹ್ನಿ, ಅಕ್ಷಯ್ ಸಹ್ನಿ ಮತ್ತು ದರ್ಗಾಲಕ್ಷ್ಮಿ ರೈ ಅವರು ಮುಂಬೈಗೆ ಪ್ರಯಾಣ ಮಾಡಲು ಅನುಮತಿ ನೀಡಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಆರ್ ಪಿ ಮೀನಾ ಅವರು ತಿಳಿಸಿದ್ದಾರೆ.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಖ್ಯಾತ ನಟ ರಿಷಿ ಕಪೂರ್ ಅವರು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com