ನೀನು ದೈವಾಂಶ ಹೊಂದಿದವಳು; ನಿನ್ನ ದೇಹದ ಬಗ್ಗೆ ನಿಂದಿಸಲು ಯಾರಿಗೂ ಬಿಡಬೇಡ; ಉರ್ಫಿಗೆ ಅಕ್ಕಮಹಾದೇವಿಯ ಪಾಠ ಮಾಡಿದ ಕಂಗನಾ!

ಬಾಲಿವುಡ್ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಕಂಗನಾ ರಣಾವತ್ ವಚನಗಾರ್ತಿ ಅಕ್ಕಮಹಾದೇವಿಯನ್ನು ನೆನಪಿಸಿಕೊಂಡಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ ಗೆ ಪಾಠ ಮಾಡುವುದಕ್ಕಾಗಿ ಅವರು ಕನ್ನಡದ ಮಹಾ ಶರಣೆ ಅಕ್ಕಮಹಾದೇವಿಯ ಉದಾಹರಣೆಯನ್ನು ನೀಡಿದ್ದಾರೆ.
ಉರ್ಫಿ ಜಾವೇದ್ ಮತ್ತು ಕಂಗನಾ
ಉರ್ಫಿ ಜಾವೇದ್ ಮತ್ತು ಕಂಗನಾ

ಬಾಲಿವುಡ್ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಕಂಗನಾ ರಣಾವತ್ ವಚನಗಾರ್ತಿ ಅಕ್ಕಮಹಾದೇವಿಯನ್ನು ನೆನಪಿಸಿಕೊಂಡಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ ಗೆ ಪಾಠ ಮಾಡುವುದಕ್ಕಾಗಿ ಅವರು ಕನ್ನಡದ ಮಹಾ ಶರಣೆ ಅಕ್ಕಮಹಾದೇವಿಯ ಉದಾಹರಣೆಯನ್ನು ನೀಡಿದ್ದಾರೆ.

ಅಕ್ಕ ಮಹಾದೇವಿ ಭಾರತದಲ್ಲಿ ರಾಣಿ ಆಗಿದ್ದವರು. ಅವರಿಗೆ ಭಗವಂತನ ಮೇಲೆ ಅತೀವ ಪ್ರೀತಿ. ನೀನು ಭಗವಂತನನ್ನೇ ಪ್ರೀತಿಸುವುದಾದರೆ, ನನ್ನಿಂದ ಯಾವುದನ್ನೂ ನೀನು ತಗೆದುಕೊಂಡು ಹೋಗಬಾರದು ಎಂದು ಗಂಡ ತಾಕೀತು ಮಾಡುತ್ತಾನೆ. ಆಕೆ ವಿವಸ್ತ್ರಳಾಗಿ ಅಲ್ಲಿಂದ ಹೊರಡುತ್ತಾಳೆ. ಯಾವತ್ತೂ ಆಕೆ ಬಟ್ಟೆ ತೊಡಲಿಲ್ಲ. ಮಹಾದೇವಿ ತುಂಬಾ ಶ್ರೇಷ್ಠಳು. ನೀನೂ ಕೂಡ ದೇಹದ ಬಗ್ಗೆ ನಿಂದಿಸಲು ಯಾರಿಗೂ ಬಿಡಬೇಡ. ನೀನು ದೈವಾಶಂವನ್ನು ಹೊಂದಿದವಳು’ ಎಂದು ಉರ್ಫಿಯನ್ನು ಹೋಲಿಸಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com