ಸಿನಿಮಾ ಚಿತ್ರೀಕರಣದ ವೇಳೆ ಸೂರಜ್ ಪಾಂಚೋಲಿಗೆ ಸುಟ್ಟ ಗಾಯ, ಆಸ್ಪತ್ರೆಗೆ ದಾಖಲು

ಮುಂಬೈನ ಫಿಲ್ಮ್ ಸಿಟಿಯಲ್ಲಿ ಕೇಸರಿ ವೀರ್: ಲೆಜೆಂಡ್ ಆಫ್ ಸೋಮನಾಥ್ ಎಂಬ ಚಿತ್ರದ ಸಾಹಸ ಚಿತ್ರೀಕರಣದ ಸಮಯದಲ್ಲಿ ಸೂರಜ್ ಪಾಂಚೋಲಿಗೆ "ಗಂಭೀರ ಸುಟ್ಟಗಾಯಗಳಾಗಿವೆ" ಎಂದು ವರದಿಯಾಗಿದೆ.
ಸೂರಜ್ ಪಾಂಚೋಲಿ
ಸೂರಜ್ ಪಾಂಚೋಲಿ
Updated on

ಮುಂಬೈ: ಸೂರಜ್ ಪಾಂಚೋಲಿ ಅವರಿಗೆ ಮಂಗಳವಾರ ತಮ್ಮ ಮುಂಬರುವ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಸುಟ್ಟಗಾಯಗಳಾಗಿದ್ದು, ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ತಂದೆ ಮತ್ತು ನಟ ಆದಿತ್ಯ ಪಾಂಚೋಲಿ ಅವರು ತಿಳಿಸಿದ್ದಾರೆ.

ಮುಂಬೈನ ಫಿಲ್ಮ್ ಸಿಟಿಯಲ್ಲಿ ಕೇಸರಿ ವೀರ್: ಲೆಜೆಂಡ್ ಆಫ್ ಸೋಮನಾಥ್ ಎಂಬ ಚಿತ್ರದ ಸಾಹಸ ಚಿತ್ರೀಕರಣದ ಸಮಯದಲ್ಲಿ ಸೂರಜ್ ಪಾಂಚೋಲಿಗೆ "ಗಂಭೀರ ಸುಟ್ಟಗಾಯಗಳಾಗಿವೆ" ಎಂದು ವರದಿಯಾಗಿದೆ.

"ಬೆಂಕಿಯ ಬಳಕೆಯನ್ನು ಒಳಗೊಂಡ ಚಿತ್ರದ ಕೆಲವು ಪ್ಯಾಚ್‌ವರ್ಕ್" ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ನಿರ್ಮಾಪಕರು ಹೇಳಿರುವುದಾಗಿ ಆದಿತ್ಯ ಪಾಂಚೋಲಿ ತಿಳಿಸಿದ್ದಾರೆ.

ಸೂರಜ್ ಪಾಂಚೋಲಿ
ಜಿಯಾ ಖಾನ್ ಆತ್ಮಹತ್ಯೆ ಪ್ರಕರಣ: ನಟ ಸೂರಜ್ ಪಾಂಚೋಲಿ'ಗೆ ಬಿಗ್ ರಿಲೀಫ್​, ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು

"ಇದು ಸ್ವಲ್ಪ ನಿಯಂತ್ರಣ ತಪ್ಪಿದೆ. ಅವರಿಗೆ(ಸೂರಜ್ ಪಾಂಚೋಲಿ) ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಉಳಿದಂತೆ ಎಲ್ಲವೂ ಸರಿಯಾಗಿದೆ" ಎಂದು ಸೂರತ್‌ನಿಂದ ಆದಿತ್ಯ ಪಾಂಚೋಲಿ ಪಿಟಿಐಗೆ ತಿಳಿಸಿದ್ದಾರೆ.

ಕೇಸರಿ ವೀರ್: ಲೆಜೆಂಡ್ ಆಫ್ ಸೋಮನಾಥ್ ಚಿತ್ರವನ್ನು ಪ್ರಿನ್ಸ್ ಧಿಮಾನ್ ಅವರು ನಿರ್ದೇಶಿಸುತ್ತಿದ್ದು, ಕಾನು ಚೌಹಾಣ್ ನಿರ್ಮಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com