'ಬಾಬಾ ಜೀ, ನನ್ನ ಯೌವನ ಅಥವಾ ಬೆಡ್‌ರೂಂ ಬಗ್ಗೆ ಹಗಲುಗನಸು ಕಾಣಬೇಡಿ': ಬಾಬಾ ರಾಮ್‌ದೇವ್‌ಗೆ ಕಂಗನಾ ರಣಾವತ್ ತಿರುಗೇಟು

ಕಂಗಾನರ ಹೇಳಿಕೆಗಳನ್ನು ಟೀಕಿಸಿದ್ದ ಬಾಬಾ ರಾಮ್‌ದೇವ್ ಅವರು, 'ದೇಶದ ಯುವಕರನ್ನು 'ಜನರೇಷನ್ ಗಟರ್' ಎಂದು ಟೀಕಿಸುವುದು ಅವರ 'ಕೆಟ್ಟ ಮನಸ್ಥಿತಿಯನ್ನು' ತೋರಿಸುತ್ತದೆ. ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.
Kangana Ranaut - Baba Ramdev
ಕಂಗನಾ ರಣಾವತ್ - ಯೋಗ ಗರು ಬಾಬಾ ರಾಮ್‌ದೇವ್
Updated on

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವಕರನ್ನು 'ಜನರೇಷನ್ ಗಟರ್' ಎಂದು ಟೀಕಿಸಿದ್ದ ತಮ್ಮ ಹೇಳಿಕೆಯನ್ನು ಟೀಕಿಸಿದ್ದ ಯೋಗ ಗುರು ಬಾಬಾ ರಾಮದೇವ್ ವಿರುದ್ಧ ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ತೀವ್ರ ವಾಗ್ದಾಳಿ ನಡೆಸಿದ್ದು, 'ತಮ್ಮ ಯೌವನ ಅಥವಾ ಖಾಸಗಿ ಜೀವನದ ಬಗ್ಗೆ 'ಹಗಲುಗನಸು' ಕಾಣದಂತೆ ಅವರಿಗೆ ಸಲಹೆ ನೀಡಿದ್ದಾರೆ.

ಇನ್‌ಸ್ಟಾಗ್ರಾಂ ಪೋಸ್ಟ್ ಒಂದರಲ್ಲಿ, ರಾಮ್‌ದೇವ್ ಅವರಿಗಿಂತ ತಾನು 'ಉತ್ತಮ ವ್ಯಕ್ತಿತ್ವ'ವನ್ನು ಹೊಂದಿದ್ದೇನೆ ಎಂದು ರಣಾವತ್ ಪ್ರತಿಪಾದಿಸಿದ್ದಾರೆ.

'ಬಾಬಾ ಜೀ, ನನ್ನ ಜವಾನಿ (ಯೌವನ) ಅಥವಾ ಮಲಗುವ ಕೋಣೆಯ ಬಗ್ಗೆ ಹಗಲುಗನಸು ಕಾಣಬೇಡಿ. ಕೇವಲ ವದಂತಿಗಳು ಮತ್ತು ಗಾಸಿಪ್‌ಗಳ ಆಧಾರದ ಮೇಲೆ ಯಾರು ಬೇಕಾದರೂ ಊಹೆಗಳನ್ನು ಮಾಡಬಹುದು. ಆದರೆ, ಕೇವಲ ವದಂತಿಗಳು ಅಥವಾ ಊಹೆಗಳಲ್ಲದೆ, ದೃಢವಾದ ಸಂಗತಿಗಳ ಆಧಾರದ ಮೇಲೆ ಉತ್ಪನ್ನಗಳ ಪರಿಣಾಮಕಾರಿತ್ವದ ಕುರಿತಾದ ಸುಳ್ಳು ಅಥವಾ ಮೋಸದ ಹೇಳಿಕೆಗಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನನ್ನ ಹೆಸರನ್ನು ಎಂದಿಗೂ ಪ್ರಸ್ತಾಪಿಸಿಲ್ಲ' ಎಂದು ರಾಮ್‌ದೇವ್ ಮತ್ತು ಅವರ ಪತಂಜಲಿ ಬ್ರ್ಯಾಂಡ್ ಸುತ್ತಲಿನ ಅನೇಕ ವಿವಾದಗಳನ್ನು ಉಲ್ಲೇಖಿಸಿ ಬಿಜೆಪಿ ಸಂಸದರು ವ್ಯಂಗ್ಯವಾಡಿದ್ದಾರೆ.

2024ರಲ್ಲಿ, ಪತಂಜಲಿ ಆಯುರ್ವೇದದ ದಾರಿತಪ್ಪಿಸುವ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಅಫಿಡವಿಟ್ ಮೂಲಕ ಸುಪ್ರೀಂ ಕೋರ್ಟ್‌ಗೆ ಬೇಷರತ್ ಕ್ಷಮೆಯಾಚಿಸಿದರು. ನ್ಯಾಯಾಲಯಕ್ಕೆ ನೀಡಿದ್ದ ಹಿಂದಿನ ಭರವಸೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರು ಪ್ರಾಮಾಣಿಕ ವಿಷಾದ ವ್ಯಕ್ತಪಡಿಸಿದರು. ಅಂತಹ ಲೋಪವನ್ನು ಪುನರಾವರ್ತಿಸುವುದಿಲ್ಲ ಮತ್ತು ಭವಿಷ್ಯದಲ್ಲಿ ಆಧುನಿಕ ವೈದ್ಯಕೀಯ ಪದ್ಧತಿಯ ವಿರುದ್ಧ ಇದೇ ರೀತಿಯ ಹಕ್ಕುಗಳನ್ನು ಮಂಡಿಸುವುದಿಲ್ಲ ಅಥವಾ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.

Kangana Ranaut - Baba Ramdev
'ಆಕೆಯ ಚಟುವಟಿಕೆಗಳು ಹೇಗಿದ್ದವು?': ಕಂಗನಾಗೆ ಬಾಬಾ ರಾಮ್​ದೇವ್ ತೀವ್ರ ತರಾಟೆ; ಸಂಸದೆ ವಿರುದ್ಧ ಕ್ರಮ ಕೈಗೊಳ್ಳುವಂತೆ BJPಗೆ ಆಗ್ರಹ

'ಆದ್ದರಿಂದ ನನಗೆ ಚಾರಿತ್ರ್ಯದ ಕುರಿತು ಪಾಠ ಮಾಡಬೇಡಿ. ತುಮ್ಸೇ ತೋ ಬಹುತ್ ಜ್ಯಾದಾ ಬೆಹ್ತರ್ ಹೈ ಮೇರಾ ಕ್ಯಾರೆಕ್ಟರ್ (ನನ್ನ ಚಾರಿತ್ರ್ಯವು ನಿಮ್ಮ ಚಾರಿತ್ರ್ಯಕ್ಕಿಂತ ಉತ್ತಮವಾಗಿದೆ) ಮೋ ವಂಚನೆಯನ್ನು ಇಲ್ಲಿ ಪತ್ತೆಹಚ್ಚಲಾಗಿದೆ' ಎಂದು ಕಂಗನಾ ತಿಳಿಸಿದ್ದಾರೆ.

ಕಂಗಾನರ ಹೇಳಿಕೆಗಳನ್ನು ಟೀಕಿಸಿದ್ದ ಬಾಬಾ ರಾಮ್‌ದೇವ್ ಅವರು, 'ದೇಶದ ಯುವಕರನ್ನು 'ಜನರೇಷನ್ ಗಟರ್' ಎಂದು ಟೀಕಿಸುವುದು ಅವರ 'ಕೆಟ್ಟ ಮನಸ್ಥಿತಿಯನ್ನು' ತೋರಿಸುತ್ತದೆ. ಆಕೆ ಯಾರು? ಅವಳ ಹಿಂದಿನ ಚಟುವಟಿಕೆಗಳು ಹೇಗಿದ್ದವು?. ನಾನು ಅಂತಹ ಜನರ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದಿದ್ದ ಅವರು ಕಂಗನಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.

X
Kannada Prabha
www.kannadaprabha.com