ಧೃತಿ ಸಿನೆಮಾ ಲಾಂಛನದಲ್ಲಿ ಎಂ.ನಾಗರಾಜು ಅವರು ನಿರ್ಮಿಸಿರುವ `ಬಾನಾಡಿ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ನಾಗರಾಜ ಕೋಟೆ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ರಾಮನಗರ, ಶ್ರೀಂಗಪಟ್ಟಣ, ಚನ್ನಪಟ್ಟಣ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
ಕಾರ್ತಿಕ್ಶರ್ಮ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಾಸನ ಮಂಜು ಸಹ ನಿರ್ದೇಶನವಿರುವ `ಬಾನಾಡಿ’ಗೆ ಸಭಾಕುಮಾರ್ ಅವರ ಛಾಯಾಗ್ರಹಣವಿದೆ. ನಾಗರಾಜ ಕೋಟೆ ಅವರ `ಉಸಿರು’ ಕೃತಿ ಆಧಾರಿತವಾಗಿರುವ ಈ ಚಿತ್ರಕ್ಕೆ ಗೂಡಿನಿಂದ ಗಗನದೆಡೆಗೆ ಎಂಬ ಅಡಿಬರಹವಿದೆ. ದತ್ತಣ್ಣ, ರಾಜೇಶ್, ಅಭಿನಯ, ಮಾಸ್ಟರ್ ಪ್ರಪುಲ್ ವಿಶ್ವಕರ್ಮ, ಕುಮಾರಿ ಧೃತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
`ಗೋಲ್ ಗೊಂಬಜ್’
ವಿ.ವಿ.ಎಂ ಸಿನಿಮಾಸ್ ಸಂಸ್ಥೆ ಲಾಂಛನದಲ್ಲಿ ಮುತ್ತುರಾಜ್ ಅವರು ನಿರ್ಮಿಸಿರುವ `ಗೋಲ್ ಗುಂಬಜ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡಿರುವ ಧನುಷ್ ಈ ಚಿತ್ರದ ನಯಕನಾಗೂ ಅಭಿನಯಿಸಿದ್ದಾರೆ. ಚಿತ್ರದ ಛಾಯಾಗ್ರಾಹಕರಾಗಿರುವ ಧನುಷ್ ಸಂಗೀತವನ್ನು ನೀಡಿದ್ದಾರೆ. ಕೆ.ಡಿ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಧನುಷ್, ಪೂರ್ಣಿಮಾ, ನಕುಲ್, ಶಿವು, ರಾಜು, ವೆಂಕಟೇಶಪ್ಪ, ಲಚ್ಚಿ, ಅನಿಲ್ ಮುಂತಾದವರಿದ್ದಾರೆ.
Advertisement