ರಕ್ತಚಂದನ ಎನ್ಕೌಂಟರ್: ಈಗ ಸಿನೆಮಾ ಆಗಲಿದೆ

ಆಂಧ್ರದ ಶೇಷಾಚಲಂ ಅರಣ್ಯದಲ್ಲಿ ಇತ್ತೀಚೆಗೆ ಆಂಧ್ರ ಪೊಲೀಸರು ಎನ್ಕೌಂಟರ್ ನಲ್ಲಿ ಕೊಂದ ೨೦ ತಮಿಳು ನಾಡಿನ ಮರ ಕಡಿಯುವವರ ಕಥೆ ಈಗ
ಶೇಷಾಚಲಂ ಎನ್ಕೌಂಟರ್ ನಡೆದ ಪ್ರದೇಶ
ಶೇಷಾಚಲಂ ಎನ್ಕೌಂಟರ್ ನಡೆದ ಪ್ರದೇಶ
Updated on

ಚೆನ್ನೈ: ಆಂಧ್ರದ ಶೇಷಾಚಲಂ ಅರಣ್ಯದಲ್ಲಿ ಇತ್ತೀಚೆಗೆ ಆಂಧ್ರ ಪೊಲೀಸರು ಎನ್ಕೌಂಟರ್ ನಲ್ಲಿ ಕೊಂದ ೨೦ ತಮಿಳು ನಾಡಿನ ಮರ ಕಡಿಯುವವರ ಕಥೆ ಈಗ ಬೆಳ್ಳಿತೆರೆಗೆ ಬರಲು ಸಿದ್ಧವಾಗುತ್ತಿದೆ. ತಮಿಳು ನಿರ್ದೇಶಕರಾದ ವಿ ಆರ್ ಕಾಳಿದಾಸ್ ಮತ್ತು ಅಗಸ್ಟಿನ್ ಜೊತೆಯಾಗಿ ಈ ಸಿನೆಮಾ ನಿರ್ದೇಶಿಸಲಿದ್ದಾರೆ.

'ತೂಕ್ಕುಮಾರ ಪೂಕಲ್' ಎಂದು ಹೆಸರಿಸಿರುವ ಈ ಸಿನೆಮಾಗೆ ಕಥೆ ಮತ್ತು ಸ್ಕ್ರೀನ್ ಪ್ಲೇ ಬರೆಯಲು 'ಅಪರಾಧಿ ಕಥೆ ಕಾದಂಬರಿ' ಪ್ರಾಕಾರದ ಜನಪ್ರಿಯ ಬರಹಗಾರ ರಾಜೇಶ್ ಕುಮಾರ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ನಿರ್ದೇಶಕರು ನೀಡಿರುವ ಹೇಳಿಕೆಯಲ್ಲಿ "ಮುಗ್ಧ ತಮಿಳು ಜನರನ್ನು ಕೊಂದ ಈ ಹೀನ ಕೃತ್ಯದ ಸತ್ಯವನ್ನು ಹೊರಗೆಡವಲು ಈ ಸೂಕ್ಷ್ಮ ಪ್ರಕರಣದ ಮೇಲೆ ಸಿನೆಮಾ ಮಾಡಲು ನಿರ್ಧರಿಸಿದ್ದೇವೆ" ಎಂದು ತಿಳಿಸಿದ್ದಾರೆ.

ಚಿತ್ರದ ತಂಡವನ್ನು ಇನ್ನು ತಿಳಿಸಬೇಕಿದೆ. ಕೊಯಂಬತ್ತೂರಿನಲ್ಲಿ ಈ ಶುಕ್ರವಾರದಿಂದ ಸಿನೆಮಾ ಚಿತ್ರೀಕರಣ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com